Advertisement

ಬುಲೆಟ್‌ ಟ್ರೈನ್‌ ದೇಶದ ಕನಸಿನ ಯೋಜನೆ

11:01 PM Feb 09, 2023 | Team Udayavani |

ಮುಂಬಯಿ:  ಮುಂಬಯಿ -ಅಹ್ಮದಾಬಾದ್‌ ಬುಲೆಟ್‌ ಟ್ರೈನ್‌ ಯೋಜನೆ ದೇಶದ ಕನಸಿನ ಯೋಜನೆ ಎಂದು ಬಾಂಬೆ ಹೈಕೋರ್ಟ್‌ ಬಣ್ಣಿಸಿದೆ. ಜತೆಗೆ ಅದು ರಾಷ್ಟ್ರೀಯ ಪ್ರಾಮುಖ್ಯತೆಯನ್ನು ಪಡೆದಿದೆ ಎಂದು ನ್ಯಾ| ಆರ್‌.ಡಿ. ಧನುಕಾ, ನ್ಯಾ| ಎಂ.ಎಂ ಸಥಾಯೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಪ್ರತಿಪಾದಿಸಿದೆ.

Advertisement

ಯೋಜನೆ ಸಂಬಂಧಿಸಿದಂತೆ ಮುಂಬಯಿಯ ವಿಖ್ರೋಲಿಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ  ವಿರೋಧಿಸಿ ಹೈಕೋರ್ಟ್‌ನಲ್ಲಿ ಗೋದ್ರೇಜ್‌ ಮತ್ತು ಬಾಯ್ಸೆ ಕಂಪೆನಿಗಳು ಅರ್ಜಿ ಸಲ್ಲಿಸಿದ್ದವು.

ಅರ್ಜಿ ಆಲಿಸಿದ ನ್ಯಾಯಪೀಠ, ಅರ್ಜಿದಾರರು ವೈಯಕ್ತಿಕ ಹಿತಾಸಕ್ತಿಗಾಗಿ ದಾವೆ ಹೂಡಿದ್ದಾರೆ. ಆದರೆ ಪ್ರಕರಣದಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಅಗತ್ಯವಿದೆ. ಬುಲೆಟ್‌ ರೈಲು ಯೋಜನೆಯು ರಾಷ್ಟ್ರೀಯ ಮೂಲಭೂತ ಸೌಕರ್ಯದ ವ್ಯಾಪ್ತಿಯಲ್ಲಿದ್ದು, ದೇಶದ ಜನತೆ ಯೋಜನೆಯ ಲಾಭ ಪಡೆಯಲಿದ್ದಾರೆ. ಹೀಗಾಗಿ ಜನರ ಹಿತಾಸಕ್ತಿಗೆ ಆದ್ಯತೆ ನೀಡಿ, ಅರ್ಜಿ  ವಜಾಗೊಳಿಸುತ್ತಿರುವುದಾಗಿ ನ್ಯಾಯಪೀಠ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next