Advertisement

ಆನೆಯಲ್ಲ-ಆಜಾನುಬಾಹು…ಕೋಣಕ್ಕೂ ಹುಟ್ಟು ಹಬ್ಬದ ಸಂಭ್ರಮ

12:43 PM Aug 03, 2022 | Team Udayavani |

ಮಹಾಲಿಂಗಪುರ: ಪಟ್ಟಣದ ಹೊರವಲಯದಲ್ಲಿ ರನ್ನಬೆಳಗಲಿ ಸರಹದ್ದಿನಲ್ಲಿರುವ ರೈತ ಸಿದ್ದು ಮಹಾದೇವ ಧರಿಗೌಡರ ಅವರು ಸಾಕಿದ ಕೋಣಕ್ಕೆ ಒಂದು ವರ್ಷದ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಮನೆಯ ಎಮ್ಮೆ ಹಾಕಿದ ಗಂಡು ಕರುವನ್ನು ಪ್ರೀತಿಯಿಂದ ಮನೆಯ ಸದಸ್ಯನಂತೆ ಸಾಕಿದ್ದಾರೆ.

Advertisement

ಅದಕ್ಕೆ ಬುಜ್ಜಿ ಮತ್ತು ಭೀಮ ಎಂದು ಹೆಸರಿಟ್ಟಿದ್ದಾರೆ. ಶನಿವಾರಕ್ಕೆ ಒಂದು ವರ್ಷ ತುಂಬಿದ ಬುಜ್ಜಿ ಗೆ ಸಂಭ್ರಮದಿಂದ ಬರ್ತಡೇ ಮಾಡಿದರು. ಆ ದಿನ ಅದರ ಮೈ ತೊಳೆದು, ಬಣ್ಣದ ಹಗ್ಗ ಮತ್ತು ಹೂಮಾಲೆಯೊಂದಿಗೆ ಅಲಂಕರಿಸಿ ಕೋಣದ ಭಾವಚಿತ್ರವಿರುವ ಬ್ಯಾನರ್‌ ತಯಾರಿಸಿ, ಪೆಂಡಾಲ್‌ ಹಾಕಿಸಿ, ಕೇಕ್‌ ಕತ್ತರಿ ನೂರಾರು ಬಂಧುಗಳನ್ನು ಆಹ್ವಾನಿಸಿ ಊಟ ಮಾಡಿಸುವ ಮೂಲಕ ಬುಜ್ಜಿ ಬರ್ತಡೇ ಮಾಡಿ ಗಮನ ಸೆಳೆದರು.ಎಲ್ಲ ಗೆಳೆಯರು ಮತ್ತು ಕುಟುಂಬದ ಸದಸ್ಯರನ್ನು ಕರೆದುಕೊಂಡು ಬುಜ್ಜಿ ಜೊತೆ ಫೋಟೋ ತೆಗೆಸಿಕೊಂಡರು.

ಆನೆಯಲ್ಲ-ಆಜಾನುಬಾಹು: ಕರುವಿಗೆ ಮೇವಿನೊಂದಿಗೆ 4 ಕೆಜಿ ಮುಸುರೆ ತಿನ್ನಿಸಿದ್ದಾರೆ. ನಿತ್ಯ 5 ಲೀ ಹಾಲು ಖರೀದಿಸಿ ಉಣಿಸಿದ್ದು ವಿಶೇಷ. ಯಾವುದಕ್ಕೂ ಕಡಿಮೆ ಮಾಡದೇ ಕಾಳಜಿಯಿಂದ ಮೇಯಿಸಿದ ಪರಿಣಾಮ ಕರು ದಷ್ಟಪುಷ್ಟವಾಗಿ ಚಿಕ್ಕ ಆನೆಯಂತೆ ಕಾಣುತ್ತಿದೆ. ಸಾಮಾನ್ಯ ಕರು 3 ವರ್ಷದ ನಂತರ ಯಾವ ಗಾತ್ರ ಬೆಳೆಯುತ್ತದೆಯೋ ಆ ಗಾತ್ರದಷ್ಟು ಒಂದೇ ವರ್ಷದ ಕರು ಬೆಳೆದಿದೆ. ಇದರ ಗಾತ್ರ, ಅಂದ ಚೆಂದ ನೋಡಿದವರು ಸೆಲಿಕ್ಲಿಕ್ಕಿಸಿಕೊಂಡು ಹೋಗುತ್ತಿದ್ದಾರೆ. ಕೆಲವರು ಈಗಾಗಲೇ 1.50 ಲಕ್ಷ ರೂ. ಬೆಲೆ ಕಟ್ಟಿ ಖರೀದಿಸಲು ಕೇಳಿದ್ದಾರೆ. ಆದರೂ ಸಿದ್ದು ಇದನ್ನು ಮಾರಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next