Advertisement

2020ರ ಕೇಂದ್ರ ಬಜೆಟ್ “ಈ ಮೂರು ಅಂಶಗಳ” ಮೇಲೆ ಸಿದ್ಧಪಡಿಸಲಾಗಿದೆ; ನಿರ್ಮಲಾ ಸೀತಾರಾಮನ್

10:13 AM Feb 02, 2020 | Nagendra Trasi |

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಲೋಕಸಭೆಯಲ್ಲಿ 2020-21ನೇ ಸಾಲಿನ ಬಜೆಟ್ ಅನ್ನು ಮಂಡಿಸಿದ್ದು, ಈ ಬಾರಿಯ ಕೇಂದ್ರ ಬಜೆಟ್ ಮೂರು ಅಂಶಗಳ ಮೇಲೆ ನಿಂತಿದೆ ಎಂದು ವಿಶ್ಲೇಷಿಸಿದರು.

Advertisement

“ ಪ್ರಸಕ್ತ ಸಾಲಿನ ನನ್ನ ಬಜೆಟ್ ಮೂರು ಅಂಶಗಳ ಮೇಲೆ ನಿಂತಿದೆ. ಆಕಾಂಕ್ಷೆಯ ಭಾರತ ಅಂದರೆ ಗುಣಮಟ್ಟದ ಬದುಕಿಗೆ ಆದ್ಯತೆ, ಪ್ರತಿಯೊಬ್ಬರ ಆರ್ಥಿಕ ಅಭಿವೃದ್ದಿ. ಸಮಾಜದ ಮಾನವೀಯತೆ ಮತ್ತು ಸಹಾನುಭೂತಿಯ ಏಳಿಗೆಗೆ ಒತ್ತು ಕೊಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಆಕಾಂಕ್ಷೆಯ ಭಾರತ ಮೊದಲ ಅಂಶದಲ್ಲಿ ಕೌಶಲ್ಯ, ಶಿಕ್ಷಣ ಮತ್ತು ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದೆ ಎಂದರು. ಕೇಂದ್ರ ಸರ್ಕಾರ 2020ರಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸಲು ಬದ್ಧವಾಗಿದೆ. ಅಲ್ಲದೇ ರೈತರ ಬರಡು ಭೂಮಿಯಲ್ಲಿ ಸೋಲಾರ್ ವಿದ್ಯುತ್ ಘಟಕ ಸ್ಥಾಪನೆಗೆ ಉತ್ತೇಜನ ನೀಡಲಾಗುವುದು ಎಂದರು.

ಎರಡನೇ ಅಂಶ ಆರ್ಥಿಕ ಬೆಳವಣಿಗೆ ಮತ್ತು ಮೂರನೇ ಬೆಳವಣಿಗೆ ಸಾಮಾಜಿಕ ಕಾಳಜಿ ಆಧಾರದ ಮೇಲೆ ಈ ಬಾರಿಯ ಬಜೆಟ್ ಸಿದ್ಧ ಪಡಿಸಲಾಗಿದೆ ಎಂದು ಸೀತಾರಾಮನ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next