Advertisement

ಬುದ್ಧನ ಚಿಂತನೆಗಳಿಂದ ಜಾಗತಿಕ ಸಮಸ್ಯೆಗಳಿಗೆ ಪರಿಹಾರ: PM ನರೇಂದ್ರ ಮೋದಿ

08:49 PM Apr 20, 2023 | Team Udayavani |

ನವದೆಹಲಿ: ಇಡೀ ಜಗತ್ತು ಯುದ್ಧ, ಆರ್ಥಿಕ ಅಸ್ಥಿರತೆ, ಭಯೋತ್ಪಾದನೆ, ಮತೀಯ ತೀವ್ರವಾದ, ಹವಾಮಾನ ವೈಪರೀತ್ಯಕ್ಕೆ ಸಿಲುಕಿ ತೊಳಲಾಡುತ್ತಿದೆ. ಈ ಸಮಸ್ಯೆಗಳಿಗೆಲ್ಲ ಭಗವಾನ್‌ ಬುದ್ಧನ ಚಿಂತನೆಗಳಿಂದ ಪರಿಹಾರ ಸಾಧ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಅವರು ನವದೆಹಲಿಯಲ್ಲಿ ಗುರುವಾರ ಆರಂಭವಾಗ ಜಾಗತಿಕ ಬೌದ್ಧ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಜಗತ್ತಿನ ಶ್ರೀಮಂತ ರಾಷ್ಟ್ರಗಳ ಯೋಚನಾಕ್ರಮವನ್ನೂ ಟೀಕಿಸಿದ ಅವರು, ಜಾಗತಿಕ ಹವಾಮಾನ ವೈಪರೀತ್ಯಕ್ಕೆ ಜಗತ್ತಿನ ಕೆಲವು ರಾಷ್ಟ್ರಗಳು ಕಾರಣ. ಅವು ಇತರರ ಬಗ್ಗೆ, ಭವಿಷ್ಯದ ಪೀಳಿಗೆಗಳ ಬಗ್ಗೆ ಯೋಚಿಸಲಿಲ್ಲ. ದಶಕಗಳ ಕಾಲ ಪ್ರಕೃತಿಯ ಮೇಲೆ ದಾಳಿ ಮಾಡುತ್ತಲೇ ಹೋದರು. ಇದರಿಂದ ತಮಗೇನು ಸಮಸ್ಯೆಯಿಲ್ಲ ಎಂದು ಭಾವಿಸಿ, ಪರಿಣಾಮವನ್ನು ಇತರರ ಮೇಲೆ ಹೇರುತ್ತಲೇ ಹೋದರು. ಒಂದು ವೇಳೆ ಬುದ್ಧನ ಚಿಂತನೆಗಳನ್ನು ಅಳವಡಿಸಿಕೊಂಡಿದ್ದರೆ ಜಗತ್ತು ಈ ಸ್ಥಿತಿಯಲ್ಲಿರುತ್ತಿಲ್ಲ ಎಂದು ಮೋದಿ ಹೇಳಿದರು.

ಬುದ್ಧನ ಚಿಂತನೆಗಳ ಬೆಳಕಿನಲ್ಲಿ ತಮ್ಮ ಮತ್ತು ಜಗತ್ತಿನ ಹಿತವನ್ನು ಸಾಧಿಸಲು ಎಲ್ಲ ದೇಶಗಳು ಚಿಂತಿಸಬೇಕಿರುವುದೇ ಈಗಿನ ಆದ್ಯತೆ. ಬುದ್ಧನ ಚಿಂತನೆಗಳಿಂದ ಪ್ರಭಾವಿತಗೊಂಡೇ ಭಾರತ ಜಾಗತಿಕ ಕಲ್ಯಾಣಕ್ಕೆ ಆದ್ಯತೆ ಕೊಡುತ್ತಿದೆ. ಇತ್ತೀಚೆಗೆ ಭೂಕಂಪಪೀಡಿತವಾದ ಟರ್ಕಿಗೆ ಭಾರತ ನೆರವಿನ ಹಸ್ತ ಚಾಚಿದ್ದೇ ಈ ಕಾರಣದಿಂದ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next