Advertisement

ಬಿಎಸ್‌ವೈ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ: ಜೋಶಿ 

12:30 AM Mar 03, 2019 | Team Udayavani |

ಹುಬ್ಬಳ್ಳಿ: ಬಿ.ಎಸ್‌.ಯಡಿಯೂರಪ್ಪನವರು ಹಿರಿಯ ನಾಯಕರಾಗಿದ್ದು, ಸೈನಿಕರ ಕಾರ್ಯಾಚರಣೆಯನ್ನು ರಾಜಕಾರಣಕ್ಕೆ ಬಳಸಿಕೊಂಡು ಮಾತನಾಡುವ ವ್ಯಕ್ತಿಯಲ್ಲ. ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಂಸದ ಪ್ರಹ್ಲಾದ ಜೋಶಿ ತಿಳಿಸಿದರು.

Advertisement

ಶನಿವಾರ ಸುದ್ದಿಗಾರಗೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ದಿಟ್ಟ ನಿರ್ಧಾರದಿಂದ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲಾಗಿದೆ. ರಾಜ್ಯದಲ್ಲಿ 22 ಸೀಟುಗಳನ್ನು ಗೆಲ್ಲುವುದಾಗಿ ಒಂದೇ
ದಾಟಿಯಲ್ಲಿ ಯಡಿಯೂರಪ್ಪ ಹೇಳಿರುವುದು ಅಪಾರ್ಥಕ್ಕೆ ಕಾರಣವಾಗಿದೆಯೇ ವಿನಃ ಸೈನಿಕರ ಕಾರ್ಯಾಚರಣೆಯಿಂದ ನಾವು 22 ಸೀಟುಗಳನ್ನು ಗೆಲ್ಲುತ್ತೇವೆ ಎಂದು ಹೇಳಿಲ್ಲ. ಇಂತಹ ಸಣ್ಣ
ರಾಜಕಾರಣ ಮಾಡುವಂತಹ ವ್ಯಕ್ತಿತ್ವ ಅವರದ್ದಲ್ಲ ಎಂದು ಬಿಎಸ್‌ವೈ ಹೇಳಿಕೆ ಸಮರ್ಥಿಸಿಕೊಂಡರು.

ಪಾಕ್‌ ಮಾಧ್ಯಮಗಳಲ್ಲಿ ಯಡಿಯೂರಪ್ಪನವರ ಈ ಹೇಳಿಕೆ ಚರ್ಚೆಯಾಗುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ವಿಪರ್ಯಾಸ ಅಂದರೆ ಪಾಕಿಸ್ತಾನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಮಾತನಾಡಿರುವ ದೇಶದ 21 ಪಕ್ಷಗಳ ನಾಯಕರ ಹೇಳಿಕೆಗಳು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿವೆ. ಇವರ ಹೇಳಿಕೆಯಲ್ಲಿ ನಮ್ಮ ದೇಶದ ರಾಷ್ಟ್ರಪ್ರೇಮಕ್ಕಿಂತ ಪರದೇಶದ ಕಾಳಜಿ ಹೆಚ್ಚಾಗಿ ತೋರುತ್ತಿದೆ. ಇವರ ಹೇಳಿಕೆಗಳೂ ಚರ್ಚೆಯಾಗುತ್ತಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next