Advertisement

ಇನ್ನು ಮೂರು ವರ್ಷ ಬಿ.ಎಸ್‌.ವೈ ಅವರೇ ಸಿಎಂ: ಕೆ.ಎಸ್‌.ಈಶ್ವರಪ್ಪ

09:38 PM May 29, 2020 | Sriram |

ರಾಮನಗರ: ಇನ್ನು ಮೂರು ವರ್ಷಗಳ ಕಾಲ ಮುಖ್ಯಮಂತ್ರಿಗಳಾಗಿ ಬಿ.ಎಸ್‌.ಯಡಿಯೂರಪ್ಪ ಇದ್ದೇ ಇರ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

Advertisement

ನಗರಕ್ಕೆ ಭೇಟಿ ಕೊಟ್ಟಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಬಿಜೆಪಿ ಸರ್ಕಾರದ ಬಗ್ಗೆ, ಬಿ.ಎಸ್‌.ಯಡಿಯೂರಪ್ಪನವರ ಬಗ್ಗೆ ಬಹಳ ದಿನಗಳಿಂದ ಗುಲ್ಲು ಇದ್ದೇ ಇದೆ. ಇದ್ಯಾವುದು ಬಾಧಕವಲ್ಲ ಎಂದರು.

ಉಮೇಶ್‌ ಕತ್ತಿ ನೇತೃತ್ವದಲ್ಲಿ ಶಾಸಕರು ಸಭೆ ನಡೆಸಿದ್ದಾರೆ. ರೆಬೆಲ್‌ ಆಗಿದ್ದಾರೆ ಎಂದು ಸುದ್ದಿಗಾರರು ಗಮನ ಸೆಳೆದಾಗ ಪ್ರತಿಕ್ರಿಯಸಿದ ಅವರು, ಸಭೆ ನಡೆಸಿದಾಕ್ಷಣ ಅವರನ್ನು ರೆಬೆಲ್‌ ಎಂದು ಯಾಕೆ ಹೇಳ್ತೀರಿ ಅಂತ ಮರು ಪ್ರಶ್ನಿಸಿದರು. ಬಿ.ಎಸ್‌.ವೈ ಅವರ ಬಗ್ಗೆ ಅಸಮಾಧಾನ ಇದೆ ಎಂದು ರಮೇಶ್‌ ಕತ್ತಿ ಹೇಳಿದ್ದಾರೆ ಎಂದು ಸುದ್ದಿಗಾರರು ಗಮನ ಸೆಳೆದಾಗ ಅವರು ಶಾಸಕರೇ ಎಂದು ಪ್ರಶ್ನಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next