Advertisement

Politics: ಸಿದ್ದು ಸರಕಾರದ ವಿರುದ್ಧ ಮೈಕೊಡವಿದ ಬಿಎಸ್‌ವೈ

01:06 AM Sep 09, 2023 | Team Udayavani |

ಬೆಂಗಳೂರು: ಕಾಂಗ್ರೆಸ್‌ ಆಡಳಿತದ ವಿರುದ್ಧ ಮೈಕೊಡವಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ರಾಜ್ಯವ್ಯಾಪಿ ಹೋರಾಟದ ರಣಕಹಳೆ ಮೊಳಗಿಸಲು ಸಜ್ಜಾಗಿದ್ದಾರೆ.
ಕೋಲಾರದ ಮುಳಬಾಗಿಲಿನ ಪುರಾಣ ಪ್ರಸಿದ್ಧ ಸ್ಥಳ ಕುರುಡುಮಲೆಯ ವಿನಾಯಕನ ಸನ್ನಿಧಾನದಲ್ಲಿ ಸೆ. 16ರಂದು ಈ ಹೋರಾಟ ಆರಂಭವಾಗಲಿದೆ.

Advertisement

ಸರಕಾರದ ಭ್ರಷ್ಟಾಚಾರ, ರೈತ ವಿರೋಧಿ ನೀತಿಯ ವಿರುದ್ಧ ಫ್ರೀಡಂ ಪಾರ್ಕ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಬಿಎಸ್‌ವೈ ಅವರು ಸರಕಾರದ ಆಡಳಿತ ವೈಫ‌ಲ್ಯದ ವಿರುದ್ಧ ಗುಡುಗಿದರು. ಈ ಭ್ರಷ್ಟ ಸರಕಾರವನ್ನು ತೊಲಗಿಸುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next