Advertisement

BSNL ಟವರ್ ಸಮಸ್ಯೆ: ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಿದ ಸಂಸದ ಕಾಗೇರಿ!

07:46 PM Jul 07, 2024 | Team Udayavani |

ಶಿರಸಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ದೆಹಲಿಯಲ್ಲಿ ದೂರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರೊಂದಿಗೆ ಮಾತನಾಡಿ ಕ್ಷೇತ್ರದಲ್ಲಿ ದೂರ ಸಂಪರ್ಕ ಇಲಾಖೆಯಿಂದ ಬಾಕಿ ಇರುವ ಟವರ್‌ಗಳ ಸ್ಥಾಪನೆ, ಅರಣ್ಯ ಇಲಾಖೆಯ ಅನುಮತಿ ಹಾಗೂ ಸಂಪರ್ಕ ವ್ಯವಸ್ಥೆಯಲ್ಲಿನ ತೊಂದರೆಗಳ ಕುರಿತು ಚರ್ಚಿಸಿ ಕೆಲಸಕ್ಕೆ ವೇಗ ಕೊಡಲು ವಿನಂತಿಸಿದರು.

Advertisement

ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ದೂರ ಸಂಪರ್ಕ ಇಲಾಖೆ ಅಧಿಕಾರಿಗಳಿಗೆ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದು ಉಳಿದ ಟವರ್ ನಿರ್ಮಾಣದ ಕ‌ನಸು ಈಡೇರಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.

ಅರಣ್ಯ ಭೂಮಿ ಸೇರಿದಂತೆ ಅನೇಕ‌ ಸಮಸ್ಯೆಗಳ ಮಧ್ಯೆಯೂ ಶಿರಸಿ ತಾಲೂಕಿನಲ್ಲಿ ಭಾರತ್ ಸಂಚಾರ ನಿಗಮದ‌ ಮೂರು ಟವರ್ ಉದ್ಘಾಟನೆಗೆ ಸಜ್ಜಾಗಿದೆ.

ತಾಲೂಕಿನ ಬರೂರು, ಕಳವೆ ಹಾಗೂ‌ ಓಣಿಕೆರಿ ಟವರ್ ಶೀಘ್ರ ಉದ್ಘಾಟನೆ ಆಗಲಿದೆ ಎಂಬುದೂ ಉಲ್ಲೇಖನೀಯ.

Advertisement

Udayavani is now on Telegram. Click here to join our channel and stay updated with the latest news.

Next