Advertisement

ಶಿಶಿಲ: ಬಿಎಸ್ಸೆನ್ನೆಲ್‌ ಕಚೇರಿಗೆ ಬೀಗ ಜಡಿದು ಗ್ರಾಮಸ್ಥರ ಆಕ್ರೋಶ

09:44 AM Nov 28, 2019 | sudhir |

ನೆಲ್ಯಾಡಿ: ಒಂದು ವರ್ಷದಿಂದ ಆಗಾಗ ಕೈಕೊಡುತ್ತಿದ್ದ ಬಿಎಸ್ಸೆನ್ನೆಲ್‌ ನೆಟ್‌ವರ್ಕ್‌ ಸಮಸ್ಯೆ ಮೂರ್‍ನಾಲ್ಕು ತಿಂಗಳಿಂದ ಪೂರ್ತಿ ಕೈಕೊಟ್ಟ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಶಿಶಿಲ ಗ್ರಾಮಸ್ಥರು ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

Advertisement

ಒಂದು ವರ್ಷಗಳಿಂದ ನಿರಂತರ ಕೈಕೊಡುತ್ತಿದ್ದ ಬಿಎಸ್ಸೆನ್ನೆಲ್‌ ನೆಟ್‌ವರ್ಕ್‌ 3 ತಿಂಗಳಿಂದ ಸಂಪೂರ್ಣ ಹದಗೆಟ್ಟು ಬ್ಯಾಂಕ್‌ ಹಾಗೂ ಪಡಿತರ ವ್ಯವಸ್ಥೆಗಾಗಿ ಗ್ರಾಮಸ್ಥರು ಪರದಾಡುತ್ತಿರುವ ಸನ್ನಿವೇಶ ನಿರ್ಮಾಣವಾಗಿತ್ತು.

ಆರೋಗ್ಯ ಸಮಸ್ಯೆಯಂತಹ ತುರ್ತು ಸಂದರ್ಭದಲ್ಲಿ, ಪಂಚಾಯತ್‌ ಸೇವೆಗಳು ಹಾಗೂ ಅಟೋ ಚಾಲಕರಿಗೆ ಬಾಡಿಗೆ ಕೂಡ ಇಲ್ಲದಂತಹ ಸಮಸ್ಯೆಯಿಂದ ಗ್ರಾಮಸ್ಥರು ಪರದಾಡುವಂತಾಗಿದ್ದು, ಬುಧವಾರ ಬಿಎಸ್ಸೆನ್ನೆಲ್‌ ಕಚೇರಿಗೆ ಬೀಗ ಜಡಿದು ಧಿಕ್ಕಾರ ಹಾಕಿ ಪ್ರತಿಭಟನೆ ನಡೆಸಿದರು.

ಕರುಣಾಕರ ಶಿಶಿಲ, ಗಣೇಶ ಕೆಮ್ಮಣ್ಣು, ಮಾಧವ ಶಿಶಿಲ, ಕಮಲಾಕ್ಷ ಶಿಶಿಲ, ನರಸಿಂಹ ಗೌಡ ಚೆನ್ನಪ್ಪ ಎಂ.ಕೆ., ಗಣೇಶ್‌ ಬರ್ಗುಳ, ಸುಧಿನ್‌ ಡಿ., ಕಮಲಾಕ್ಷ ಸತ್ತಿಕಲ್‌, ದೇರಣ್ಣ ಅಡ್ಡಹಳ್ಳ, ಕೊರಗಪ್ಪ ಪಡು³, ದೇವಣ್ಣ ಗೌಡ, ನಾರಾಯಣ ಗೌಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next