Advertisement

ಬೂತ್ ವಶಕ್ಕೆ ಯತ್ನ; ಗಾಳಿಯಲ್ಲಿ ಗುಂಡು ಹಾರಿಸಿ ಗುಂಪು ಚದುರಿಸಿದ ಬಿಎಸ್ ಎಫ್

09:58 AM Apr 12, 2019 | Nagendra Trasi |

ಲಕ್ನೋ: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆಯಲ್ಲಿ ಗುಂಪೊಂದು ಗುರುತು ಪತ್ರ ಇಲ್ಲದೇ ಮತ ಚಲಾಯಿಸಲು ಬಂದಿದ್ದು, ಈ ಸಂದರ್ಭದಲ್ಲಿ ಮತಚಲಾಯಿಸಲು ಅವಕಾಶ ಕೊಡಬೇಕೆಂದು ಗಲಾಟೆ ಆರಂಭಿಸಿದಾಗ ಬಿಎಸ್ ಎಫ್ ಯೋಧರು ಗಾಳಿಯಲ್ಲಿ ಹಲವು ಸುತ್ತು ಗುಂಡು ಹಾರಿಸಿ ಗುಂಪನ್ನು ಚದುರಿಸಿದ ಘಟನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.

Advertisement

ಎಎನ್ ಐ ವರದಿ ಪ್ರಕಾರ, ಕೆಲವು ಜನರು ವೋಟರ್ ಐಡಿ ಇಲ್ಲದೆ ಮತ ಹಾಕಲು ಮುಂದಾದಾಗ ಭದ್ರತೆಯ ದೃಷ್ಟಿಯ ಹಿನ್ನೆಲೆಯಲ್ಲಿ ಬಿಎಸ್ ಎಫ್ ಸಿಬ್ಬಂದಿಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಬಳಿಕ ಮತದಾನ ಪ್ರಕ್ರಿಯೆ ಪುನರಾರಂಭಗೊಂಡಿತ್ತು ಎಂದು ತಿಳಿಸಿದೆ.

ಇಂದು ಮೊದಲ ಹಂತದ ಲೋಕಸಭಾ ಚುನಾವಣೆ ನಡೆದಿದ್ದು, ಈ ವೇಳೆ ಶಾಮ್ಲಿಯ ಕಾನ್ ದ್ಲಾ ಪ್ರದೇಶದಲ್ಲಿ ಗುಂಪೊಂದು ಮತಹಾಕುವ ನೆಪದಲ್ಲಿ ಬಂದು ಮತದಾನ ಕೇಂದ್ರವನ್ನು ವಶಪಡಿಸಿಕೊಳ್ಳಲು ಯತ್ನಿಸಿದ್ದರು. ಆದರೆ ಬಿಎಸ್ ಎಫ್ ಯೋಧರು ಅದಕ್ಕೆ ಅವಕಾಶ ಕೊಡಲಿಲ್ಲ ಎಂದು ಮತ್ತೊಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next