Advertisement

ವಿಜಯಪುರ: ಹೋಳಿ ಹಬ್ಬದಲ್ಲಿ ಬಣ್ಣಹಚ್ಚಿ ಭಾವೈಕ್ಯತೆ ಮೆರೆದ ಮುಶ್ರೀಫ್

09:07 PM Mar 18, 2022 | Team Udayavani |

ವಿಜಯಪುರ: ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ಹೋಳಿ ಹಬ್ಬದ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಮುಖಂಡ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಹಿಂದೂ ಸ್ನೇಹಿತರೊಂದಿಗೆ ಬಣ್ಣದಾಟವಾಡಿ ಹೋಳಿದಲ್ಲಿ ಭಾವೈಕ್ಯತೆ ಮೆರೆದರು.

Advertisement

ನಗರದ ಮಹಾತ್ಮಾ ಗಾಂಧೀಜಿ ವೃತ್ತದಲ್ಲಿ ಸ್ನೇಹಿತರೊಂದಿಗೆ ಬಣ್ಣ ಹಚ್ಚಿ-ಹಚ್ಚಿಸಿಕೊಂಡು ಪರಸ್ಪರ ಶುಭಾಶಯ ವಿನಿಯಮ ಮಾಡಿಕೊಂಡು ಮಾತನಾಡಿದ ಅಬ್ದುಲ್ ಹಮೀದ್ ಮುಶ್ರೀಫ್, ಎಲ್ಲಾ ಬಣ್ಣಗಳಂತೆ ಎಲ್ಲಾ ಸಮುದಾಯದ ಜನರು ಒಂದಾಗಿ ಭಾವೈಕ್ಯತೆಯಿಂದ ಸಮಾಜದಲ್ಲಿ ಭಾತೃತ್ವ ಮೆರೆಯಬೇಕಿದೆ. ವಿವಿಧತೆಯಲ್ಲಿ ಏಕೈತೆಯನ್ನು ಸಾರುವ ಭಾರತದ ಸಂಸ್ಕೃತಿಯನ್ನು ಎಲ್ಲರೂ ಎತ್ತಿ ಹಿಡಿಯುವ ಮೂಲಕ ದೇಶದ ಹಿರಿಮೆಯನ್ನು ಸಂರಕ್ಷಿಸುವ ಕೆಲಸ ಮಾಡೋಣ ಎಂದರು.

ವೈಜನಾಥ ಕರ್ಪೂರಮಠ, ಕಲ್ಲಪ್ಪ ಪಾಟಶೆಟ್ಟಿ, ಇರ್ಫಾನ್ ಶೇಖ್, ಮೈನುದ್ದೀನ್ ಅಗಸಬಾಳ, ಈರಪ್ಪ ಕುಂಬಾರ, ರವೀಂದ್ರ ಜಾಧವ, ಧನರಾಜ, ಅರುಣ ಭಜಂತ್ರಿ, ಅನೀಲ ಸೂರ್ಯವಂಶಿ, ಅಲ್ಲಾಪೀರ ಮೀರಜಕರ, ರಮೇಶ ಮೋದಿ, ಚಂದ್ರಶೇಖರ ಪೂಜಾರಿ, ಆಬೀದ್ ಸಂಗಮ, ತಾಜುದ್ದೀನ್ ಅತ್ತಾರ ಸೇರಿದಂಥೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next