Advertisement

ಮುರಿದ ಬೃಹತ್‌ ರಥದ ಚಕ್ರ ; ತಪ್ಪಿದ ಭಾರೀ ಅನಾಹುತ

09:16 AM Mar 29, 2019 | Vishnu Das |

ಕೊಪ್ಪಳ : ಇತಿಹಾಸ ಪ್ರಸಿದ್ಧ ಕನಕಗಿರಿ ಕನಕರಾಯನ ರಥೋತ್ಸವದ ವೇಳೆ ಭಾರೀ ಅವಘಡವೊಂದು ತಪ್ಪಿ ಹೋಗಿದ್ದು, ರಥದ ಚಕ್ರದ ನಡುವಿನ ಕಟ್ಟಿಗೆಯ ಇರಿಸು ಮುರಿದು ಬಿದ್ದಿದೆ. ಅದೃಷ್ಟವಷಾತ್‌ ಯಾರೋಬ್ಬರಿಗೂ ಹಾನಿಯಾಗಿಲ್ಲ.

Advertisement

ರಥದ ಇರಿಸು ಮುರಿದಿರುವುದು ಗಮನಕ್ಕೆ ಬಂದ ತಕ್ಷಣ ರಥದಲ್ಲಿದ್ದ ಅರ್ಚಕರನ್ನು ಕೆಳಗೆ ಇಳಿಸಲಾಯಿತು. ನೆರೆದಿದ್ದ ನೂರಾರು ಭಕ್ತರು ರಥ ಕುಸಿಯದಂತೆ ತಡೆದರು.

ರಥೋತ್ಸವಕ್ಕೆ ಬಂದಿದ್ದ ಸಾವಿರಾರು ಭಕ್ತರು ತೀವ್ರ ನಿರಾಶರಾದರು. ನಾಳೆ ಉಳಿದ ವಿಧಿ ವಿಧಾನಗಳನ್ನು ನಡೆಸುವುದಾಗಿ ತಿಳಿಸಿದ್ದಾರೆ.

ರಥ ಹಳೆಯದ್ದಾಗಿದ್ದರಿಂದ ಅವಘಡ ಸಂಭವಿಸಿದೆ ಎಂದು ಹೇಳಲಾಗಿದ್ದು, ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಭಕ್ತರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next