Advertisement

ಮದ್ವೆ ಆಗಿ ವಾರದಲ್ಲೇ ವಧು ಆತ್ಮಹತ್ಯೆ

04:32 PM Nov 09, 2017 | |

ಬೆಂಗಳೂರು: ಮದುವೆಯಾಗಿ 8ನೇ ದಿನಕ್ಕೆ ನವವಧು ನೇಣಿಗೆ ಶರಣಾಗಿರುವ ಘಟನೆ ನಗರದಲ್ಲಿ ಗುರುವಾರ  ನಡೆದಿದೆ.

Advertisement

ಹರ್ಷಿತಾ ಎಂಬ 25 ವರ್ಷದ ಯುವತಿ ಪತಿಯ ಮನೆಯಲ್ಲಿ ನೇಣಿಗೆ ಶರಣಾಗಿದ್ದು, ಆತ್ಮಹತ್ಯೆಯ ಬಳಿಕ ಪತಿಯ ಮನೆಯವರು ನೇಣಿನ ಕುಣಿಕೆಯಿಂದ ಇಳಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಖಾಸಗಿ ಕಂಪೆನಿಯ ಉದ್ಯೋಗಿಯಾಗಿದ್ದ ಇಟ್ಟಮಡು ನಿವಾಸಿ ಚೇತನ್‌ರೊಂದಿಗೆ ಮದ್ದೂರು ಮೂಲದ ಕೃಷಿಕ ದಂಪತಿಯ ಪುತ್ರಿ ಹರ್ಷಿತಾ ವಿವಾಹವನ್ನು ನಡೆಸಲಾಗಿತ್ತು.  

ನಮ್ಮ ಮಗಳನ್ನು ನೇಣು ಬಿಗಿದು ಕೊಲೆ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. 

ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು  ತನಿಖೆ ಮುಂದುವರಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next