Advertisement

ಮಂಡ್ಯ:ಮದುವೆ ದಿನವೇ ಪರೀಕ್ಷೆಗೆ ಹಾಜರಾದ ವಧು!

03:46 PM May 09, 2018 | Team Udayavani |

ಮಂಡ್ಯ: ಹೆಣ್ಣಿಗೆ ಮದುವೆ ಅನ್ನುವುದು ಮಹತ್ವದ ದಿನ ಆದಿನ ಮದುಮಗಳಾಗಿ ಹಸೆಮಣೆ ಏರುವ ಗಳಿಗೆ. ಬೇರೆ ಯಾವುದೇ ಕೆಲಸವು ಮದುಮಗಳಿಗಿಲ್ಲ. ಆದರೆ ಕೆ.ಆರ್‌.ಪೇಟೆಯಲ್ಲಿ  ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಪರೀಕ್ಷೆ ಬರೆದು ಮದುವೆ ಮಂಟಪಕ್ಕೆ ತೆರಳಿ ಸುದ್ದಿಯಾಗಿದ್ದಾಳೆ. 

Advertisement

ಕಾವ್ಯಾ ಎಂಬಾಕೆಗೆ ಲೋಹಿತ್‌ ಎನ್ನುವ ವರನೊಂದಿಗೆ ವಿವಾಹ ನಿಗದಿಯಾಗಿತ್ತು. ಆದರೆ ಇಂದೇ  ಟ್ಯಾಕ್ಸೆಷನ್‌ ಪರೀಕ್ಷೆಯೂ ಇತ್ತು. 9.15 ರ ವೇಳೆ ಸಾಲಂಕೃತ ವಧುವಾಗಿ ಪರೀಕ್ಷಾ ಕೊಠಡಿಯಲ್ಲಿ  ಹಾಜರಿದ್ದ ಕಾವ್ಯಾ, ಸಂಭ್ರಮದಲ್ಲಿಯೇ ಪರೀಕ್ಷೆ ಬರೆದು ಮಹೂರ್ತಕ್ಕೆ  ಸರಿಯಾಗಿ ಮದುವೆ ಮಂಟಪಕ್ಕೆ ತೆರಳಿದ್ದಾರೆ. 

ಪ್ರತಿಭಾವಂತೆಯಾಗಿರುವ ಕಾವ್ಯಾ ಈಗಾಗಲೇ ಬರೆದಿರುವ 3 ಸೆಮ್‌ಗಳಲ್ಲಿ 90% ಅಂಕ ಪಡೆದಿದ್ದರು. ಈ ಬಾರಿ ಪರೀಕ್ಷೆ ಬರೆಯಲಾಗದೆ ಉಳಿದುಹೋಗಬಾರದು ಎಂದು ಕಾವ್ಯಾ ಮನೆಯವರು ಮತ್ತು ಗಂಡನ ಮನೆಯವರು ಪರೀಕ್ಷೆ ಬರೆಯಲೇಬೇಕೆಂದು ಪ್ರೋತ್ಸಾಹ ನೀಡಿದ್ದಾರೆ. ಈ ನಿರ್ಧಾರಕ್ಕೆ ಸಾಮಾಜಿಕ ತಾಣಗಳು ಸೇರಿದಂತೆ ಎಲ್ಲೆಡೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. 

ಅದೇಷ್ಟೋ ಹೆಣ್ಣು ಮಕ್ಕಳು ಮದುವೆಗಾಗಿ ಶಿಕ್ಷಣವನ್ನೇ ಮೊಟಕುಗೊಳಿಸಿದ್ದು, ಪರೀಕ್ಷೆಗಳನ್ನು ತಪ್ಪಿಸಿಕೊಂಡಿದ್ದು ಇದೆ. ಅಂತಹದರಲ್ಲಿ ಈ ಘಟನೆ ಎಲ್ಲರಿಗೂ ಮಾದರಿ ಎನಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next