Advertisement

ಬಳ್ಳಾರಿ: ಖಾತಾ ಬದಲವಾಣೆಗಾಗಿ ಲಂಚ ಕೇಳಿದ್ದ ವಿಎ ಎಸಿಬಿ ಬಲೆಗೆ

08:42 PM May 30, 2022 | Team Udayavani |

ಬಳ್ಳಾರಿ: ಖಾತಾ ಬದಲಾವಣೆ ಮಾಡಿಕೊಡುವುದಾಗಿ ಮಚದ ಬೇಡಿಕೆ ಇಟ್ಟಿದ್ದ ದೇವಲಾಪುರ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಜಿ.ಅತೀಫ್ ಎಸಿಬಿ ಬಲೆಗೆ ಬಿದ್ದಿದ್ದಾರೆ.

Advertisement

ಬಳ್ಳಾರಿ ತಾಲೂಕು ಬೇವಿನಗಳ್ಳಿ ಗ್ರಾಮ ನಿವಾಸಿಯಾಗಿದ್ದ ಜೆಎಸ್ ಡಬ್ಲ್ಯು ಹೆಚ್ ಆರ್ ಮ್ಯಾನೇಜರ್ ಕೆ.ಗಿರಿಧರ್ ಎನ್ನುವವರು ನಿವೇಶನ ನೋಂದಣಿ ಸಂಬಂಧಿಸಿದಂತೆ ಖಾತೆಯನ್ನು ಪತ್ನಿ ಹೆಸರಿಗೆ ಬದಲಾವಣೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕಾಗಿ ಕಂಪ್ಲಿ ತಾಲೂಕು ದೇವಲಾಪುರ ಗ್ರಾಮದ ವಿಎ ಜಿ.ಅತೀಫ್, 15000 ರೂ. ಲಂಚದ ಬೇಡಿಕೆ ಇಟ್ಟಿದ್ದಾರೆ.

ಇದನ್ನೂ ಓದಿ : ಸರ್ಕಾರಿ ನೌಕರರ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಶೀಘ್ರ ಚಾಲನೆ : ಸಿಎಂ

ಲಂಚ ನೀಡದ ಹಿನ್ನೆಲೆಯಲ್ಲಿ ಕೆಲಸವನ್ನು ಬಾಕಿ ಉಳಿಸಿದ್ದು, ಕೊನೆಗೆ 5000 ರೂ. ನೀಡುವಂತೆ ಕೋರಿದ್ದಾರೆ.  ಅದರಂತೆ 5000 ಸಾವಿರ ರೂ. ಲಂಚದ ಹಣ ಪಡೆಯುವಾಗ ಎಸಿಬಿ ಎಸ್ ಪಿ ಶ್ರೀಹರಿಬಾಬು ಮೇಲ್ವಿಚಾರಣೆಯಲ್ಲಿ ಡಿಎಸ್ ಪಿ ಸೂರ್ಯನಾರಾಯಣ, ಪಿಐಗಳಾದ ಪ್ರಭುಲಿಂಗ ಸ್ವಾಮಿ ಹಿರೇಮಠ, ಸುಂದರೇಶ್ ಅವರು ದಾಳಿ ನಡೆಸಿ, ಆರೋಪಿಯನ್ನು ಹಣದ ಸಮೇತ ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next