Advertisement

ದಿಲ್ಲಿ ಗಾಳಿ ಸಿಗರೇಟ್‌ಗೆ ಸಮ

06:15 AM Oct 23, 2017 | Team Udayavani |

ಹೊಸದಿಲ್ಲಿ: ದೇಶದ ರಾಜಧಾನಿಯ ವಾಯುಮಾಲಿನ್ಯ ಮಟ್ಟ ದೀಪಾವಳಿ ನಂತರ ಮತ್ತಷ್ಟು ವಿಷಮ ಸ್ಥಿತಿ ತಲುಪಿದ್ದು, ಹಬ್ಬದ ನಂತರ ಶ್ವಾಸಕೋಶ ಹಾಗೂ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿ ರುವವರ ಸಂಖ್ಯೆ ಶೇ. 30ರಷ್ಟು ಹೆಚ್ಚಾಗಿದೆ. ಈ ಪ್ರಮಾಣದ ಹೊರರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿರುವುದನ್ನು ನೋಡಿ ಸ್ವತಃ ವೈದ್ಯರೇ ಕಂಗಾಲಾಗಿದ್ದು, ಪ್ರಸ್ತುತ ಸಂದರ್ಭದಲ್ಲಿ ದಿಲ್ಲಿ ಗಾಳಿ ಸೇವಿಸುವುದು ದಿನಕ್ಕೆ 50 ಸಿಗರೇಟು ಸೇದುವುದಕ್ಕೆ ಸಮ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

Advertisement

ಅದಾಗಲೇ ಆಘಾತಕಾರಿ ಸ್ಥಿತಿ ತಲುಪಿದ್ದ ಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡೇ, ಸುಪ್ರೀಂ ಕೋರ್ಟ್‌ ದೀಪಾವಳಿ ವೇಳೆ ರಾಜಧಾನಿಯಲ್ಲಿ ಪಟಾಕಿ ಮಾರಾಟ ರದ್ದು ಮಾಡಿತ್ತು. ಆದರೆ, ಜನ ಬೇಜವಾಬ್ದಾರಿ ಯಿಂದ ಪಟಾಕಿ ಹೊಡೆದೇ ಹಬ್ಬ ಆಚರಿ ಸಿದ್ದರು. ಹೀಗಾಗಿ, ಅಲ್ಲಿ ಪರಿಸ್ಥಿತಿ ಹದಗೆಟ್ಟಿದೆ. 

ಹಬ್ಬ ಮುಗಿದ ದಿನದ ರಾತ್ರಿಯಿಂದಲೇ ದಿಲ್ಲಿಯ ಪ್ರತಿಷ್ಠಿತ ಆಸ್ಪತ್ರೆಗಳಾದ ಸರ್‌ ಗಂಗಾರಾಮ್‌ ಆಸ್ಪತ್ರೆ, ವಲ್ಲಭಬಾಯಿ ಪಟೇಲ್‌ ಚೆಸ್ಟ್‌ ಇನ್ಸ್ಟಿಟ್ಯೂಟ್‌ ಮುಂತಾದೆಡೆ ಶ್ವಾಸಕೋಶ ಸಮಸ್ಯೆ ಉಸಿರಾಟದ ತೊಂದರೆಗಳಿಂದ ಜನ  ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇವರಲ್ಲಿ ಅನೇಕರಿಗೆ ಹಿಂದೆ ಇಂಥ ಸ್ಥಿತಿ ಅನುಭವಿಸಿಲ್ಲವೆಂದು ಹೇಳಿದ್ದಾರೆ. ಹೊಸತಾಗಿ ಆಸ್ಪತ್ರೆಗೆ ಮಕ್ಕಳೂ ದಾಖಲಾಗುತ್ತಿರುವುದು ವೈದ್ಯರಲ್ಲಿ ಆತಂಕ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next