Advertisement

ಬ್ರೇಕ್‌ ದಿ ಚೈನ್‌: 2ನೇ ಹಂತದ ಚಟುವಟಿಕೆ ಆರಂಭ

04:18 PM May 05, 2020 | sudhir |

ಕಾಸರಗೋಡು: ಬ್ರೇಕ್‌ ದಿ ಚೈನ್‌ ಅಭಿಯಾನದ ಎರಡನೇ ಹಂತವಾಗಿರುವ “ಮುಂದುವರಿ ಯಲಿದೆ ಈ ಜಾಗೃತೆ’ ಚಟು ವಟಿಕೆಗಳು ಕಾಸರಗೋಡು ಜಿಲ್ಲೆ ಯಲ್ಲಿ ಆರಂಭಗೊಂಡಿದೆ. ರಾಜ್ಯ ಸರಕಾರ, ಸಮಾಜ ನೀತಿ ಇಲಾಖೆ, ಮಹಿಳಾ ಶಿಶು ಕಲ್ಯಾಣ ಇಲಾಖೆ, ಕೇರಳ ಸಮಾಜ ಸುರಕ್ಷೆ ಮಿಷನ್‌ ವತಿಯಿಂದ ಕಾರ್ಯಕ್ರಮ ನಡೆಯುತ್ತಿದೆ.

Advertisement

ಈ ನಿಟ್ಟಿನಲ್ಲಿ 13,500 ಭಿತ್ತಿಪತ್ರಗಳು, 20 ಕಿಯಾಸ್ಕ್ಗಳನ್ನು ಜಿಲ್ಲೆಯಲ್ಲಿ ವಿತರಣೆ ನಡೆಸಲಾಗಿದೆ.

ಎಲ್ಲ ಗ್ರಾಮ ಪಂಚಾಯತ್‌ ಗಳಲ್ಲಿ, ನಗರಸಭೆಗಳಲ್ಲಿ, ಸಾರ್ವಜನಿಕ ಕೇಂದ್ರಗಳಲ್ಲಿ, ಅಂಚೆ ಕಚೇರಿಗಳಲ್ಲಿ, ಪೊಲೀಸ್‌ ಠಾಣೆಗಳಲ್ಲಿ, ಅಂಗನವಾಡಿಗಳಲ್ಲಿ ಇತ್ಯಾದಿ ಕಡೆ ಭಿತ್ತಿಪತ್ರ ಲಗತ್ತಿಸಲಾಗುವುದು. ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆಚ್ಚುವರಿ ದಂಡನಾಧಿಕಾರಿ ಎನ್‌. ದೇವಿದಾಸ್‌ ಅವರು ಪಂಚಾಯ ತ್‌ ಡೆಪ್ಯುಟಿ ಡೈರೆಕ್ಟರ್‌ ಅವರಿಗೆ ಭಿತ್ತಿಪತ್ರ ಮತ್ತು ಕಿಯಾಸ್ಕ್ಗಳನ್ನು ಹಸ್ತಾಂತರಿಸಿದರು. ಕೇರಳ ಸಮಾಜ ಸುರಕ್ಷೆ ಮಿಷನ್‌ ಜಿಲ್ಲಾ ಸಂಚಾಲಕ ಜಿಷೋ ಜೇಮ್ಸ್‌, ಸಹಾಯಕ ಸಂಚಾಲಕರಾದ ಅಶ್ರಫ್‌, ರಾಜೇಶ್‌ ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next