Advertisement

ಬೆದರಿಕೆ ಹಾಕುವ ಟಿಎಂಸಿ ನಾಯಕರ ಕೈ, ಕಾಲು ಮುರಿಯಿರಿ:ಬಿಜೆಪಿ ಶಾಸಕ

11:55 AM Nov 14, 2021 | Team Udayavani |

ಕೋಲ್ಕತಾ : ‘ನಿಮಗೆ ಬೆದರಿಕೆ ಹಾಕುವ ಟಿಎಂಸಿ ನಾಯಕರ ಕೈ, ಕಾಲು ಮುರಿಯಿರಿ’ ಎಂದು ಪಕ್ಷದ ಕಾರ್ಯಕರ್ತರಿಗೆ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ಸ್ವಪನ್ ಮಜುಂದಾರ್ ಪ್ರಚೋದನೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ.

Advertisement

ಸಾಮಾಜಿಕ ತಾಣಗಳಲ್ಲಿ ಕಾಣಿಸಿಕೊಂಡಿರುವ ವೀಡಿಯೊದಲ್ಲಿ, ಬೊಂಗಾವ್ ದಕ್ಷಿಣದ ಬಿಜೆಪಿ ಶಾಸಕ ಸ್ವಪನ್ ಮಜುಂದಾರ್ ಅವರು, ಯಾವುದೇ ಪರಿಸ್ಥಿತಿಯಲ್ಲಿ ಸಂಕಷ್ಟದಲ್ಲಿರುವ ಪಕ್ಷದ ಕಾರ್ಯಕರ್ತರನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ಭರವಸೆ ನೀಡಿದ್ದು, ಪ್ರಚೋದನಕಾರಿ ಹೇಳಿಕೆ ನೀಡಿರುವುದು ಕಂಡು ಬಂದಿದೆ.

ಟಿಎಂಸಿ ನಾಯಕ ನಮ್ಮ ಕಾರ್ಯಕರ್ತರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲು ಪ್ರಯತ್ನಿಸಿದರೆ, ನಮ್ಮ ಕಾರ್ಯಕರ್ತರನ್ನು ಭೀತಿಗೆ ಗುರಿಪಡಿಸಿದರೆ, ಆ ನಾಯಕ ಸುರಕ್ಷಿತವಾಗಿ ಹಿಂತಿರುಗುವುದಿಲ್ಲ. ಸಾಕಾಗಿ ಹೋಗಿದೆ, ಆತ್ಮರಕ್ಷಣೆಗಾಗಿ ಅವನ ಕೈ ಕಾಲುಗಳನ್ನು ಮುರಿದು ನನ್ನ ಬಳಿಗೆ ಬನ್ನಿ. ನಾನು ಭರವಸೆ ನೀಡುತ್ತೇನೆ. ನಿಮ್ಮ ಪರವಾಗಿ ನಿಲ್ಲುತ್ತೇನೆ ಎಂದು ಸ್ವಪನ್ ಮಜುಂದಾರ್ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next