Advertisement

ಚಾರ್ಮಾಡಿ ಘಾಟಿಯಲ್ಲಿ ಪಿಕಪ್‌ ವಾಹನದ ಬ್ರೇಕ್‌ಫೈಲ್‌…ತಪ್ಪಿದ ಭಾರಿ ಅನಾಹುತ

09:51 PM Feb 17, 2023 | Team Udayavani |

ಬೆಳ್ತಂಗಡಿ: ಚಾರ್ಮಾಡಿ ಘಾಟಿ ಇಳಿಯುವ ವೇಳೆ ರಾಷ್ಟ್ರೀಯ ಹೆದ್ದಾರಿಯ ಮಠದ ಮಜಲು ಬಳಿ ಪಿಕಪ್‌ ವಾಹನ ಬ್ರೇಕ್‌ಫೈಲ್‌ ಆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಚಲಿಸುತ್ತಿದ್ದಾಗ ಅರಣ್ಯ ಇಲಾಖೆ ಹಾಗು ಸ್ಥಳೀಯರ ಮುಂಜಾಗ್ರತೆಯಿಂದ ಭಾರಿ ಅನಾಹುತ ತಪ್ಪಿದ ಘಟನೆ ಶುಕ್ರವಾರ ಬೆಳಗ್ಗೆ ನಡೆಯಿತು.

Advertisement

ಮುಂಜಾನೆ 7 ಗಂಟೆ ಸುಮಾರಿಗೆ ನೂರಾರು ಶಿವರಾತ್ರಿ ಪಾದಯಾತ್ರಿಗಳು ಆಗಮಿಸುತ್ತಿದ್ದರು. ಈ ವೇಳೆ ನಿಯಂತ್ರಣ ಕಳೆದುಕೊಂಡ ವಾಹನ ಅಡ್ಡಾದಿಡ್ಡಿ ಚಲಿಸುತ್ತಿತ್ತು. ತಕ್ಷಣ ಗಮನಿಸಿದ ಅರಣ್ಯ ಇಲಾಖೆಯ ಸಿಬಂದಿ ಹಾಗೂ ಸ್ಥಳೀಯರು ವಾಹನವನ್ನು ಕಲ್ಲು, ಬಡಿಗೆಗಳಿಂದ ತಡೆಯಲು ಯತ್ನಿಸಿ ನಿಯಂತ್ರಣಕ್ಕೆ ತಂದು ಅಪಾಯ ಉಂಟಾಗದಂತೆ ಕಾರ್ಯತತ್ಪರತೆ ಮೆರೆದಿದ್ದಾರೆ. ಈ ವೇಳೆ ರಸ್ತೆ ಬದಿಯ ಧರೆಗೆ ಗುದ್ದಿದ ವಾಹನದ ಮುಂಭಾಗ ಜಖಂ ಆಗಿದೆ.

ಇದನ್ನೂ ಓದಿ: ನೇತ್ರಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆ: ದೋಣಿ, ಮರಳು ವಶಕ್ಕೆ

Advertisement

Udayavani is now on Telegram. Click here to join our channel and stay updated with the latest news.

Next