Advertisement

Brand Mangaluru Rohan Cup; ಬೆಂಗಳೂರು ನಗರ ಪ್ರಥಮ, ಹಾಸನ ತಂಡ ದ್ವಿತೀಯ

12:08 AM Jan 08, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯು ಡಬ್ಲ್ಯೂಜೆ)ದ ಸಹಯೋಗದಲ್ಲಿ ರಾಜ್ಯ ಮಟ್ಟದ “ಬ್ರ್ಯಾಂಡ್ ಮಂಗಳೂರು ರೋಹನ್‌ ಕಪ್‌-2024′ ಕ್ರಿಕೆಟ್‌ ಪಂದ್ಯದಸಮಾರೋಪ ರವಿವಾರ ನಡೆಯಿತು.

Advertisement

ವೀರಯೋಧ ದಿ| ಕ್ಯಾ| ಎಂ.ವಿ. ಪ್ರಾಂಜಲ್‌ ಸ್ಮರಣಾರ್ಥ ಮೂರು ದಿನಗಳ ಕಾಲ ಅಡ್ಯಾರ್‌ನ ಸಹ್ಯಾದ್ರಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯಾಟ ನಡೆಯಿತು.

ಪಂದ್ಯಾವಳಿಯಲ್ಲಿ ಬೆಂಗಳೂರು ನಗರ ಕಾರ್ಯನಿರತ ಪತ್ರಕರ್ತರ ಸಂಘ ಪ್ರಥಮ, ಹಾಸನ ಕಾರ್ಯನಿರತ ಪತ್ರಕರ್ತರ ತಂಡ ದ್ವಿತೀಯ ಹಾಗೂ ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ತೃತೀಯ ಪ್ರಶಸ್ತಿ ಗಳಿಸಿದೆ.
ಸಮಾರೋಪ ಸಮಾರಂಭದಲ್ಲಿ ವಿಪಕ್ಷ ನಾಯಕ ಆರ್‌. ಅಶೋಕ್‌, ಮಾಜಿ ಸಚಿವರಾದ ಬೈರತಿ ಬಸವರಾಜ್‌, ಬಿ. ರಮಾನಾಥ ರೈ, ಶಾಸಕ ಹರೀಶ್‌ ಪೂಂಜಾ, ವಿಧಾನ ಪರಿಷತ್‌ ಸದಸ್ಯ ಡಾ| ಮಂಜುನಾಥ ಭಂಡಾರಿ, ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ, ಪ್ರಮುಖರಾದ ಡಾ| ಎಂ. ಮೋಹನ ಆಳ್ವ, ಕಿಶೋರ್‌ ಆಳ್ವ, ಸುಚರಿತ ಶೆಟ್ಟಿ, ಯು.ಟಿ. ಇಫ್ತಿಕಾರ್‌ ಅಲಿ, ಮನ್ಸೂರ್‌ ಅಲಿ, ಗೋಪಾಲ್‌ ಕುಂದರ್‌, ಲೀಲಾಕ್ಷ ಕರ್ಕೇರಾ, ಮತ್ತಿಕೆರೆ ಜಯರಾಮ್‌, ಜಗನ್ನಾಥ ಶೆಟ್ಟಿ ಬಾಳ, ಇಬ್ರಾಹಿಂ ಅಡ್ಕಸ್ಥಳ, ಖಾದರ್‌ ಶಾ, ರೋನ್ಸ್‌ ಬಂಟ್ವಾಳ್‌, ಪಿ.ಬಿ. ಹರೀಶ್‌ ರೈ, ಆರ್‌. ರಾಮಕೃಷ್ಣ, ಜಿತೇಂದ್ರ ಕುಂದೇಶ್ವರ, ಭಾಸ್ಕರ್‌ ರೈ ಕಟ್ಟ, ವಿಜಯ ಕೋಟ್ಯಾನ್‌ ಪಡು, ರಾಜೇಶ್‌ ದಡ್ಡಂಗಡಿ, ವಿಲ್ಫೆ†ಡ್‌ ಡಿ’ಸೋಜಾ, ಆರಿಫ್‌ ಪಡುಬಿದ್ರೆ, ರಾಜೇಶ್‌ ಪೂಜಾರಿ, ಅನ್ನು ಮಂಗಳೂರು, ಪುಷ್ಪ ರಾಜ್‌ ಬಿ.ಎನ್‌. ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next