Advertisement

Bramavara: ಚೇರ್ಕಾಡಿಗೆ ಬಂದಿದ್ದ ಬೆಂಗಳೂರಿನ ಕ್ಯಾಬ್‌ ಚಾಲಕ ಸಾವು

10:48 PM May 28, 2024 | Team Udayavani |

ಬ್ರಹ್ಮಾವರ: ಬೆಂಗಳೂರಿನ ಕ್ಯಾಬ್‌ ಚಾಲಕ ರಂಗನಾಥ(40) ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

Advertisement

ಕಾರು ಚಾಲಕನಾಗಿ ಮೇ 25ರಂದು ಬೆಂಗಳೂರಿನಿಂದ 7 ಮಂದಿಯೊಂದಿಗೆ ಹೊರಟು ಚೇರ್ಕಾಡಿಗೆ ಬಂದಿದ್ದರು. ಸೋಮವಾರ ಸಂಜೆ ಪತ್ನಿ ಕರೆ ಮಾಡಿದಾಗ ಶಂಕರ ಎನ್ನುವವರು ಸ್ವೀಕರಿಸಿ ನಿಮ್ಮ ಪತಿಗೆ ಆರೋಗ್ಯ ಸರಿ ಇಲ್ಲದೆ ಇದ್ದು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿಸಿದ್ದರು.

ಕೂಡಲೇ ಪತ್ನಿ ಕ್ಯಾಬ್‌ ಮಾಲಿಕರೊಂದಿಗೆ ಹೊರಟು ಆಸ್ಪತ್ರೆಗೆ ಬರುವಾಗ ಆಸ್ಪತ್ರೆಯಿಂದ ಕರೆ ಬಂದಿದ್ದು ರಂಗನಾಥ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಕುರಿತು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next