Advertisement

ಬ್ರಹ್ಮಾವರ: ಜಿಲ್ಲಾ  ದಂತ ವೈದ್ಯರ ಸಮ್ಮೇಳನ

01:30 AM Jan 17, 2019 | Team Udayavani |

ಬ್ರಹ್ಮಾವರ: ಇಲ್ಲಿನ ಕೃಷಿ ಕೇಂದ್ರ ಬಳಿ ಇರುವ ಬಿಲ್‌ಬೋರ್ಡ್‌ನಲ್ಲಿ ಜಿಲ್ಲಾ ದಂತ ವೈದ್ಯರ ಸಮ್ಮೇಳನ ಉಡುಪಿ ಡೆಂಟೊ ಫೆಸ್ಟ್‌-19 ಜರಗಿತು. ಜಿಲ್ಲೆಯ ಎಲ್ಲ ತಾಲೂಕಿನಿಂದ ಇಂಡಿಯನ್‌ ಡೆಂಟಲ್‌ ಅಸೋಸಿಯೇಶನ್‌ ಸದಸ್ಯರು, ಕುಟುಂಬಸ್ಥರು ಪಾಲ್ಗೊಂಡಿದ್ದರು.

Advertisement

ಐಡಿಎ ಜಿಲ್ಲಾ ಶಾಖೆಯ ನೂತನ ಅಧ್ಯಕ್ಷರಾಗಿ ಡಾ| ಮನೋಜ್‌ ಮ್ಯಾಕ್ಸಿಮ್‌ ಡಿಲೀಮಾ ಬ್ರಹ್ಮಾವರ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಡಾ| ಸಯ್ಯದ್‌ ಮಹಮ್ಮದ್‌ ಪೈಝ್ ಉಡುಪಿ, ಖಜಾಂಚಿ ಡಾ| ಸುಧೀರ್‌ ರಾವ್‌ ಮಲ್ಪೆ ಆಯ್ಕೆಯಾ ದರು. ಐಡಿಎ ರಾಜ್ಯ ಅಧ್ಯಕ್ಷ ಡಾ| ಪ್ರಕಾಶ್‌ ಎಚ್‌.ಪಿ., ರಾಜ್ಯ ಕಾರ್ಯದರ್ಶಿ ಡಾ| ಶಿವಪ್ರಸಾದ್‌, ಖಜಾಂಚಿ ಡಾ| ಸುಶಾಂತ್‌ ಹಾಗೂ ಭಾರತದ ಡೆಂಟಲ್‌ ಕೌನ್ಸಿಲ್‌ ಸದಸ್ಯ ಡಾ| ಶಿವಶರಣ್‌ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. 

ಐಡಿಎ ಜಿಲ್ಲಾ ಶಾಖೆಯು ಹಿರಿಯ ನಾಗರಿಕರಿಗೆ ದಂತ ಸಂರಕ್ಷಣೆ ಮಾಹಿತಿ, ತಪಾಸಣೆ, ಚಿಕಿತ್ಸಾ  ಪ್ರದರ್ಶನ ವನ್ನು ಅಜ್ಜರಕಾಡು ಪಾರ್ಕ್‌ ಬಳಿ ಹಮ್ಮಿ ಕೊಂಡಿತು. 

ಕಡಿಯಾಳಿ ಶಾಲೆಯಲ್ಲಿ ದಂತ ಮಾಹಿತಿ ಶಿಬಿರ, ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ, ಹಾಲು ಸೊಸೈಟಿ, ಸಾೖಬ್ರಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಮೊದಲಾ ದೆಡೆ ಬಾಯಿಯ ಕ್ಯಾನ್ಸರ್‌ ರೋಗದ ಜಾಗೃತಿ 
ಕಾರ್ಯಕ್ರಮ ಆಯೋಜಿಸಿತು. ಶಂಕರಪುರ ವಿಶ್ವಾಸದ ಮನೆ, ಪೇತ್ರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಚೇರ್ಕಾಡಿ ಸಮೃದ್ದಿ ಮಹಿಳಾ ಮಂಡಳಿ, ಸುಮೇದ ವಿಶೇಷ ಶಾಲೆ ನೀಲಾವರದಲ್ಲಿ ದಂತ ತಪಾಸಣೆ, ಮಾಹಿತಿ ಕಾರ್ಯಕ್ರಮ  ಹಮ್ಮಿಕೊಳ್ಳಲಾಯಿತು.

ಡಾ| ವಿಜಯೇಂದ್ರ ರಾವ್‌ ಉಡುಪಿ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next