Advertisement

ಇಂದಿನಿಂದ ಉದಯವಾಹಿನಿಯಲ್ಲಿ ಹೊಸ ಧಾರಾವಾಹಿ ಬ್ರಹ್ಮಾಸ್ತ್ರ

10:41 AM Jan 22, 2018 | |

ಉದಯ ವಾಹಿನಿ, ಈಗ ಹೊಸ ಧಾರಾವಾಹಿಯೊಂದನ್ನು ಶುರು ಮಾಡುತ್ತಿದೆ. ಆ ಧಾರಾವಾಹಿ ಹೆಸರು “ಬ್ರಹ್ಮಾಸ್ತ್ರ’. ಜನವರಿ 22 (ಇಂದಿನಿಂದ) ರಿಂದ ರಾತ್ರಿ 8 ಕ್ಕೆ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗಲಿದೆ. ಕನ್ನಡದ ಹುಡುಗ ಮತ್ತು ತೆಲುಗು ಹುಡುಗಿ ನಡುವೆ ನಡೆಯುವ ಲವ್‌ಸ್ಟೋರಿ ಹೊಂದಿರುವ “ಬ್ರಹ್ಮಾಸ್ತ್ರ’ದಲ್ಲಿ ಆಪ್ಪಟ ಮನರಂಜನೆಯ ಹೂರಣವಿದೆ. ನಿರ್ಮಾಪಕ ಕಮ್‌ ನಿರ್ದೇಶಕ ರವಿ ಆರ್‌.ಗರಣಿ ಅವರ ಸಾರಥ್ಯದಲ್ಲಿ “ಬ್ರಹ್ಮಾಸ್ತ್ರ’ ಮೂಡಿಬರುತ್ತಿದೆ.

Advertisement

ಇದು ಮನೋಧರ್ಮದ ಎರಡು ಕುಟುಂಬದ ನಡುವೆ ನಡೆಯುವ ಕಥೆ. ಒಂದು ಕಡೆ ಅಧಿಕಾರದ ಮದ, ಇನ್ನೊಂದು ಕಡೆ ಪ್ರೀತಿಯ ಅಮೃತ. ಒಂದು ಕುಟುಂಬಕ್ಕೆ ದ್ವೇಷವೇ ದೇವರು. ಇನ್ನೊಂದು ಕುಟುಂಬಕ್ಕೆ ಪ್ರೀತಿಯೇ ದೇವರು. ಅಧರ್ಮದ ಅಧಿಪತ್ಯ, ಧರ್ಮ ಪರಿಪಾಲನೆ ಮತ್ತು ಅವುಗಳ ಮುಖಾ-ಮುಖೀ ಒಳಗೊಂಡ ವಿಭಿನ್ನ ಚಿತ್ರಕಥೆ, ನಿರೂಪಣೆಯಲ್ಲಿ “ಭ್ರಹ್ಮಾಸ್ತ್ರ’ ಮೂಡಿಬರಲಿದೆ.

ತೆಲುಗು ಹುಡುಗಿಯ ಕುಟುಂಬ ಕನ್ನಡ ಹುಡುಗನ ಕುಟುಂಬದವರ ವೈಮನಸ್ಸುಗಳ ನಡುವೆ ನಡೆಯುವ ರೋಚಕ ಪ್ರೀತಿಯ ಕಥೆ ಧಾರಾವಾಹಿಯ ಹೈಲೈಟ್‌ ಎಂಬುದು ತಂಡದ ಮಾತು. ಈ ಬಾರಿ ಹೊಸ ಕಥೆ ಆಯ್ಕೆ ಮಾಡಿಕೊಂಡು ಕೆಲವು ಸಿದ್ಧ ಸೂತ್ರಗಳನ್ನು ಬದಿಗೊತ್ತಿ, ವಿಶಿಷ್ಠ ಕಥೆ ಕೈಗೆತ್ತಿಕೊಂಡಿರು ನಿರ್ದೇಶಕ ರವಿ ಆರ್‌.ಗರಣಿ ಅವರು ಈಗಾಗಲೇ “ಬ್ರಹ್ಮಾಸ್ತ್ರ’ ಟೀಸರ್‌ ಬಿಡುಗಡೆ ಮಾಡಿದ್ದಾರೆ.

ಗ್ರಾಮೀಣ ಮತ್ತು ನಗರ ಜನರಿಗೆ ಇಷ್ಟವಾಗುವ ಅಂಶಗಳು ಈ ಧಾರಾವಾಹಿಯಲ್ಲಿವೆ. ಪ್ರಮೋದ್‌ ಹಾಗು ದೀಪಾ ಹಿರೇಮಠ್ ಧಾರಾವಾಹಿಯ ಮುಖ್ಯ ಪಾತ್ರಧಾರಿಗಳು. ಉಳಿದಂತೆ ತ್ರಿವೇಣಿ, ಶೈಲಶ್ರೀ, ಶಂಕರ್‌ಅಶ್ವಥ್‌, ಸುದರ್ಶನ್‌, ಅಶೋಕ್‌ ಹೆಗ್ಗಡೆ, ವಿಜಯ್‌ ಕೌಂಡಿಣ್ಯ, ಮೈಸೂರು ಹರಿ, ಸಿದ್ದೇಶ್ವರ್‌, ರಶ್ಮಿತಾ, ಪಲ್ಲವಿ, ಪವನ್‌, ರಜನಿಕಾಂತ್‌ ಮುಂತಾದವರು ನಟಿಸುತ್ತಿದ್ದಾರೆ. ಗರಣಿ ಪೊಡಕ್ಷನ್ಸ್‌ನಲ್ಲಿ ಲತಾ ಆರ್‌.ಗರಣಿ ನಿರ್ಮಿಸುತ್ತಿರುವ ಈ ಧಾರಾವಾಹಿಗೆ ಕಿರಣ್‌ ಛಾಯಾಗ್ರಹಣವಿದೆ. ತಿಲಕ್‌ ನಿರ್ದೇಶಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next