Advertisement

ವಿಮಾನದಲ್ಲಿ ಓಡಾಡುವವರ‌ಲ್ಲೂ BPL ಕಾರ್ಡ್‌: ಡಾ| ಸಿ.ಎನ್‌. ಮಂಜುನಾಥ್‌

11:22 PM Feb 03, 2024 | Team Udayavani |

ಬೆಂಗಳೂರು: “ವಿಮಾನದಲ್ಲಿ ಓಡಾಡುವ ಶ್ರೀಮಂತರ ಕೈಯಲ್ಲೂ ಬಿಪಿಎಲ್‌ ಕಾರ್ಡ್‌ ಇರುವುದು ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವಾಗ ನನ್ನ ಅನುಭವಕ್ಕೆ ಬಂತು. ರಾಜ್ಯದ ಶೇ.30ರಷ್ಟು ಮಂದಿ ಶ್ರೀಮಂತರು ಈಗಲೂ ಕಡುಬಡವರಿಗಾಗಿ ಸರಕಾರ ನೀಡುವ ಬಿಪಿಎಲ್‌ ಕಾರ್ಡ್‌ ಇಟ್ಟುಕೊಂಡಿದ್ದಾರೆ’ ಎಂದು ಜಯದೇವ ಹೃ ದ್ರೋಗ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ನಿರ್ದೇಶಕ ಸ್ಥಾನದಿಂದ ಇತ್ತೀಚೆಗೆ ನಿವೃತ್ತರಾದ ಡಾ| ಸಿ.ಎನ್‌. ಮಂಜುನಾಥ್‌ ಹೇಳಿದರು.

Advertisement

ರಾಜ್ಯ ಒಕ್ಕಲಿಗರ ಸಂಘವು ಕುವೆಂಪು ಕಲಾಕ್ಷೇತ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗ ಒಬ್ಬ ವ್ಯಕ್ತಿಗೆ ಚಿಕಿತ್ಸೆ ನೀಡಬೇಕಾಗಿತ್ತು. ಆತ ತಡವಾಗಿ ಬಂದಿದ್ದ. ಯಾಕಪ್ಪ ಇಷ್ಟು ತಡವಾಗಿ ಬಂದೆ ಎಂದು ಕೇಳಿದೆ. ಆತ ಒಂದು ಕೈಯಲ್ಲಿ ಬಿಪಿಎಲ್‌ ಕಾರ್ಡ್‌ ಹಿಡಿದು, ಸರ್‌ ವಿಮಾನದಲ್ಲಿ ಬಂದೆ, ಅದಕ್ಕೆ ತಡವಾಯಿತು ಎಂದಾಗ ನಾನು ಆಶ್ಚರ್ಯಗೊಂಡೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next