Advertisement

ಗ್ರಾಪಂ ಚುನಾವಣೆಗೂ ಬಹಿಷ್ಕಾರ ಅಸ್ತ್ರ!

05:42 PM Dec 07, 2020 | Suhan S |

ಮಸ್ಕಿ: ಎನ್‌ಆರ್‌ಬಿಸಿ 5ಎ ಕಾಲುವೆ ಅನುಷ್ಠಾನದ ಬೇಡಿಕೆ ಇಟ್ಟು ಕೇವಲ ಮಸ್ಕಿ ಕ್ಷೇತ್ರದ ಉಪಚುನಾವಣೆ ಮಾತ್ರವಲ್ಲ, ಗ್ರಾಪಂ ಚುನಾವಣೆಗೂ ರೈತರು ಬಹಿಷ್ಕಾರದ ಪ್ರತಿಜ್ಞೆ ತೊಡುತ್ತಿದ್ದು, ಈಗ ಕೇವಲ ಚುನಾಯಿತರಿಗೆ ಮಾತ್ರವಲ್ಲ ಅಧಿಕಾರಿ ವಲಯಕ್ಕೂ ತಲೆಬಿಸಿಗೆ ಕಾರಣವಾಗಿದೆ.

Advertisement

ಮಸ್ಕಿ ಉಪಚುನಾವಣೆ ಘೋಷಣೆ ಹೊತ್ತಲ್ಲೇ ಚುರುಕಾದ ನೀರವಾರಿ ಹೋರಾಟಗಳು ಸರಕಾರಕ್ಕೆ ಸವಾಲೊಡ್ಡಿವೆ. ರೈತರ ಚಳವಳಿಯ ಬಲ ಆಕಾಂಕ್ಷಿಗಳ ಎದೆಯಲ್ಲೂ ನಡುಕ ಹುಟ್ಟಿಸಿತ್ತು. ಉಪಚುನಾವಣೆ ನೆಪದಲ್ಲಿ ಪ್ರಚಾರಕ್ಕೆ ಆಗಮಿಸುತ್ತಿದ್ದ ಹಾಲಿ-ಮಾಜಿ ಶಾಸಕರು, ಮಂತ್ರಿಗಳಿಗೂ ಇದರ ಬಿಸಿ ಈಗಾಗಲೇ ತಟ್ಟಿದ್ದಾಗಿದೆ. ಆದರೆ ಮಸ್ಕಿ ಉಪಚುನಾವಣೆಗೆಮುನ್ನವೇ ಗ್ರಾಪಂಗಳ ಚುನಾವಣೆಘೋಷಣೆಯಾಗಿದ್ದು, ಈ ಚುನಾವಣೆಗಳನ್ನೂ ಜನರು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

30 ಹಳ್ಳಿಗಳು: ನಾರಾಯಣಪುರ ಬಲದಂಡೆನಾಲೆಯ 5ಎ ಶಾಖೆ ಕಾಲುವೆ ಅನುಷ್ಠಾನಕ್ಕಾಗಿ ಈಗಾಗಲೇ ಸಂತ್ರಸ್ತ ಹಳ್ಳಿಗಳ ರೈತರು ಕಳೆದ 17 ದಿನಗಳಿಂದ ಅನಿರ್ದಿಷ್ಟ ಅವಧಿ ಹೋರಾಟ ಆರಂಭಿಸಿದ್ದಾರೆ. ಮಸ್ಕಿ ತಾಲೂಕಿನ ಪಾಮನಕಲ್ಲೂರು ಹೋಬಳಿ ಕೇಂದ್ರದಆದಿಬಸವೇಶ್ವರ ದೇವಸ್ಥಾನ ಎದುರು ಪ್ರತಿಭಟನೆ ನ.20ರಿಂದ ಆರಂಭವಾಗಿದೆ. ಹೋರಾಟದ ಬಿಸಿ ಬಿಜೆಪಿ ಸರಕಾರದ ಮಂತ್ರಿಗಳು, ಕಾಂಗ್ರೆಸ್‌ ಪಕ್ಷದ ನಾಯಕರಿಗೂ ತಟ್ಟಿದೆ. ಒಂದು ರೀತಿ ಮಸ್ಕಿ ಉಪಚುನಾವಣೆಗೆ ಇದೇ ಹೋರಾಟವೇಅಸ್ತ್ರವಾಗಿ ಬಳಕೆಯಾಗಿತ್ತು. ಆದರೆ ಈಗ ವಿಧಾನಸಭೆ ಚುನಾವಣೆಗೆ ಮೊದಲು ಗ್ರಾಪಂ ಚುನಾವಣೆ ಘೋಷಣೆಯಾಗಿದೆ. ಹೀಗಾಗಿ ಈ5ಎ ಶಾಖೆ ಕಾಲುವೆಯಿಂದ ನೀರಾವರಿ ಭಾಗ್ಯ ಹೊಂದುವ ಪ್ರಮುಖ ನಾಲ್ಕು ಪಂಚಾಯಿತಿಯ 30 ಹಳ್ಳಿಗಳು ಚುನಾವಣೆ ಬಹಿಷ್ಕಾರದ ನಿರ್ಧಾರ ಕೈಗೊಂಡಿವೆ.

ಮಸ್ಕಿ ತಾಲೂಕಿನ ಪಾಮನಕಲ್ಲೂರು (8 ಹಳ್ಳಿ), ವಟಗಲ್‌ (5 ಹಳ್ಳಿ), ಅಂಕುಶದೊಡ್ಡಿ (6 ಹಳ್ಳಿ), ಅಮೀನಗಡ (5 ಹಳ್ಳಿ) ಗ್ರಾಪಂ ವ್ಯಾಪ್ತಿಯ 30ಕ್ಕೂ ಹೆಚ್ಚು ಹಳ್ಳಿಗರು ಈಗಾಗಲೇ ಆಯಾ ಗ್ರಾಮಗಳಲ್ಲಿ ಪ್ರತ್ಯೇಕ ಸಭೆಗಳನ್ನು ನಡೆಸಿ ಚುನಾವಣೆ ಬಹಿಷ್ಕಾರ ನಿರ್ಧಾರದ ಜತೆಗೆ ಪ್ರತಿಜ್ಞೆಯನ್ನು ಸ್ವೀಕರಿಸಿದ್ದಾರೆ.

ಹೆಚ್ಚಿನ ಆತಂಕ: ಎನ್‌ಆರ್‌ಬಿಸಿ 5ಎ ಕಾಲುವೆ ಹೋರಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ರೈತರ ಧರಣಿಸ್ಥಳಕ್ಕೆ ಆಗಮಿಸಿ ರೈತರ ಮನವೊಲಿಸುವ ಪ್ರಯತ್ನಮಾಡಿದರು. ಈ ಯೋಜನೆ ಅನುಷ್ಠಾನಕ್ಕೆ ಪೂರಕ ಪ್ರಯತ್ನ ಮಾಡಲಾಗುವುದು. ಧರಣಿ ಕೈ ಬಿಡುವಂತೆ ನಿವೇಧಿ ಸಿಕೊಂಡಿದ್ದರು. ಆದರೆ ಈ ಯೋಜನೆಗಾಗಿ ಪ್ರತ್ಯೇಕ 500 ಕೋಟಿ ರೂ.ಗಳಾದರೂ ಘೋಷಣೆ ಮಾಡುವವರೆಗೆ ಹೋರಾಟ ನಿಲ್ಲದು ಎನ್ನುತ್ತಾರೆ ರೈತರು.

Advertisement

ಹೀಗಾಗಿ ಸದ್ಯ ಹೋರಾಟದ ಬಿಸಿ ಎಂಎಲ್‌ಎ ಚುನಾವಣೆ ಆಕಾಂಕ್ಷಿಗಳಿಗೆ ಮಾತ್ರವಲ್ಲ; ಗ್ರಾಪಂ ಚುನಾವಣೆ ಉಮೇದುವಾರರಿಗೂ ನುಂಗಲಾರದತುತ್ತಾಗಿದೆ. ಸದ್ಯ ಜಿಲ್ಲಾಡಳಿತಕ್ಕೆ ಚುನಾವಣೆಬಹಿಷ್ಕಾರದ ಅಸ್ತ್ರ ಸವಾಲಾಗಿದ್ದು, ಜಿಲ್ಲಾಡಳಿತಯಾವ ರೀತಿ ಪರಿಹಾರ ಕಂಡುಕೊಳ್ಳಲಿದೆ ಕಾದು ನೋಡಬೇಕಿದೆ.

ರೊಟ್ಟಿ, ದವಸ-ಧಾನ್ಯ :  ಕಳೆದ 17 ದಿನಗಳಿಂದ ನಡೆದಿರುವ ಹೋರಾಟಕ್ಕೆ ಸ್ವತಃ ಯೋಜನೆ ಬಾಧಿ ತ ಹಳ್ಳಿಗರೇ ಹೋರಾಟ ನಿರತರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ಆಯಾ ಗ್ರಾಮಗಳಿಂದಲೇ ರೊಟ್ಟಿ, ಅಕ್ಕಿ ಸೇರಿ ಇತರೆ ದವಸ ಧಾನ್ಯಗಳನ್ನು ತಂದು ಧರಣಿ ಸ್ಥಳದಲ್ಲಿಯೇ ಅಡುಗೆ ಮಾಡಿ ಬಡಿಸಲಾಗುತ್ತಿದೆ. ಈ ರೀತಿಯ ಹೋರಾಟದ ಕಿಚ್ಚು ದಿನೆ-ದಿನವೂ ಹೆಚ್ಚಾಗುತ್ತಿದ್ದು, ರೈತರ ಸಂಖ್ಯೆಯೂ ಹೆಚ್ಚುತ್ತಲಿದೆ.

ಏನಿದು 5-ಕಾಲುವೆ?:  ನಾರಾಯಣಪುರ ಜಲಾಶಯದಿಂದ ಹೆಚ್ಚುವರಿಯಾಗಿ ಹರಿದು ಪೋಲಾಗುವ ನೀರನ್ನು ಬಳಸಿಕೊಂಡು 5-ಎ ಶಾಖಾ ಕಾಲುವೆ ನಿರ್ಮಾಣದ ಮೂಲಕ ರಾಯಚೂರು, ಕೊಪ್ಪಳ ಜಿಲ್ಲೆಯ 100ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಯೋಜನೆಯ ಉದ್ದೇಶ. ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಯಿಂದ 5ಎ ಶಾಖಾ ಕಾಲುವೆಗಳನ್ನು ನಿರ್ಮಿಸಿಗಳ ಮೂಲಕ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ 7 ತಾಲೂಕುಗಳ 107 ಹಳ್ಳಿಗಳ 72,000 ಹೆಕ್ಟೇರ್  (1,77,912 ಎಕರೆ) ಜಮೀನುಗಳಿಗೆ ನೀರು ಒದಗಿಸುವ ಯೋಜನೆಯಾಗಿದೆ. ಇದಕ್ಕಾಗಿ 2,755 ಕೋಟಿ ರೂ. ವ್ಯಯವಾಗಲಿದೆ ಎಂದು ಸರಕಾರ ಅಂದಾಜಿಸಿದೆ. ಇದರ ಪ್ರಾಥಮಿಕ ಸರ್ವೇ ಕಾರ್ಯವೂ ಆರಂಭವಾಗಿದೆ. ಆದರೆ ಈ ಯೋಜನೆ ಅನುಷ್ಠಾನದ ಕುರಿತು ಸರಕಾರದಿಂದ ಅಧಿಕೃತ ಲಿಖೀತ ಆದೇಶ ಹೊರ ಬೀಳುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.

 

ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next