Advertisement

ಕಾರು ಢಿಕ್ಕಿ ಹೊಡೆದು ಮಿಠಾಯಿ ಕೊಳ್ಳಲು ಅಂಗಡಿಗೆ ಹೋದ ಬಾಲಕ ಸಾವು

07:11 PM Feb 13, 2023 | Team Udayavani |

ಕಾಸರಗೋಡು: ಕುತಿಕ್ಕೋಲ್‌ ನೆಲ್ಲಿತ್ತಾವಿನಲ್ಲಿ ಕಾರು ಢಿಕ್ಕಿ ಹೊಡೆದು ಇಲ್ಲಿನ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ನೌಶಾದ್‌ ಅವರ ಪುತ್ರ, ಕುತ್ತಿಕ್ಕೋಲ್‌ ಎಯುಪಿ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್‌ ಬಿಲಾಲ್‌(12) ಮೃತಪಟ್ಟ ಘಟನೆ ನಡೆದಿದೆ.

Advertisement

ಕ್ವಾರ್ಟರ್ಸ್‌ನ ಎದುರುಗಡೆಯಿರುವ ಅಂಗಡಿಯಿಂದ ಮಿಠಾಯಿ ಖರೀದಿಸಿ ಮನೆಗೆ ವಾಪಸಾಗುತ್ತಿದ್ದಾಗ ಕಾರು ಢಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡ ಬಿಲಾಲ್‌ ಅವರನ್ನು ಕಾಸರಗೋಡಿನ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಬೇಡಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಪುತ್ತೂರಿಗೆ ಶಾಫಿ ಬೆಳ್ಳಾರೆ ಎಸ್‌ಡಿಪಿಐ ಅಭ್ಯರ್ಥಿ; ಜೈಲಿನಿಂದಲೇ ಸ್ಪರ್ಧೆ!?

Advertisement

Udayavani is now on Telegram. Click here to join our channel and stay updated with the latest news.

Next