Advertisement

ವಿಜಯಪುರ: ನೀರು ಕುಡಿಯಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದ ಬಾಲಕ

02:05 PM Aug 15, 2020 | keerthan |

ವಿಜಯಪುರ: ನೀರು ಕುಡಿಯಲು ಹೋಗಿದ್ದಾಗ ಕಾಲು ಜಾರಿ ಕೆರೆಗೆ ಬಿದ್ದು ಬಾಲಕನೊಬ್ಬ ಕಾಣೆಯಾದ ಘಟನೆ ವಿಜಯಪುರ ತಾಲೂಕ ಬರಟಗಿ ತಾಂಡಾದಲ್ಲಿ ಶನಿವಾರ ಜರುಗಿದೆ.

Advertisement

ಕೆರೆಯಲ್ಲಿ ಕಾಣೆಯಾದ ಬಾಲಕನಿಗಾಗಿ ಸ್ಥಳೀಯರು ಶೋಧ ನಡೆಸಿದ್ದಾರೆ.

ಬರಟಗಿ ತಾಂಡಾ 4 ರಲ್ಲಿ ಘಟನೆ ಜರುಗಿದ್ದು, ಕೆರೆ ನೀರಲ್ಲಿ ಕಾಲುಜಾರಿ ಬಿದ್ದ ಬಾಲಕನನ್ನು 5 ವರ್ಷದ ಯುವರಾಜ ರಾಠೋಡ ಎಂದು ಗುರುತಿಸಲಾಗಿದೆ.

ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದರೂ ತುರ್ತಾಗಿ ಸ್ಥಳಕ್ಕೆ ಬಾರದ ಕುರಿತು ಆಕ್ರೋಶ ವ್ಯಕ್ತಪಡಿಸುತ್ತಿರುವ ಸ್ಥಳೀಯರು, ಸ್ವಯಂ ತಾವೇ ಬಾಲಕನಿಗಾಗಿ ಕೆರೆಯಲ್ಲಿ ಶೋಧ ಆರಂಭಿಸಿದ್ದಾರೆ.

ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next