Advertisement

ಕುರಿ ಮೈತೊಳೆಯಲು ಹೋಗಿದ್ದ ಬಾಲಕ ಭೀಮಾ ನದಿ ನೀರಲ್ಲಿ ಮುಳುಗಿ ಸಾವು

09:18 AM Nov 16, 2020 | keerthan |

ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಅರಕೆರೆ ಗ್ರಾಮದ ಬಳಿ ಭೀಮಾ ನದಿಯಲ್ಲಿ ಕುರಿಗಳ ಮೈ ತೊಳೆಯಲು ಹೋಗಿದ್ದ ಬಾಲಕ ನೀರುಪಾಲಾದ ದುರ್ಘಟನೆ ನಡೆದಿದೆ.

Advertisement

ಮೃತ ಬಾಲಕನನ್ನು ಅಗರಖೇಡ ಗ್ರಾಮದ 17 ವರ್ಷದ ವಿಠ್ಠಲ ಕರೆಪ್ಪ ಪೂಜಾರಿ ಎಂದು ಗುರುತಿಸಲಾಗಿದೆ.

ದೀಪಾವಳಿ ಹಬ್ಬದ ಪ್ರಯುಕ್ತ ಕುರಿಗಳನ್ನು ಭೀಮಾನದಿಯಲ್ಲಿ ತೊಳೆದು ಗ್ರಾಮದ ದೇವಸ್ಥಾನದ ಮುಂದೆ ಮೆರವಣಿಗೆ ಮಾಡುವುದು ರೂಢಿ. ಹೀಗಾಗಿ ಬಾಲಕ ವಿಠ್ಠಲ ಹಾಗೂ ಆತನ ತಂದೆ ಕರೆಪ್ಪ ಭೀಮಾ ನದಿಗೆ ಹೋಗಿ ಕುರಿಗಳ ಮೈ ತೊಳೆಯಲು ಮುಂದಾಗಿದ್ದರು.

ಇದನ್ನೂ ಓದಿ:ಕೈ ಪಾಳಯದಲ್ಲಿ ಮತ್ತೆ ಹಿರಿಯರ ಮುನಿಸು: ಹೈಕಮಾಂಡ್ ವಿರುದ್ಧ ಹರಿಹಾಯ್ದ ಕಪಿಲ್ ಸಿಬಲ್

ಈ ಸಂದರ್ಭದಲ್ಲಿ ಬಾಲಕ ವಿಠ್ಠಲ ನದಿಯ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಇಂಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next