Advertisement

ಸೆಲ್ಫಿ ತೆಗೆಯಲು ಹೋಗಿ ದುರಂತ : ರೈಲ್ವೆ ವಿದ್ಯುತ್‌ ತಂತಿ ತಗುಲಿ ಬಾಲಕನಿಗೆ ಗಂಭೀರ ಗಾಯ

08:22 PM Apr 14, 2021 | Team Udayavani |

ಸುರತ್ಕಲ್ : ಇಲ್ಲಿನ ಕೆಂಜಾರು ಬಳಿ ನಿಲ್ಲಿಸಿದ್ದ ಗೂಡ್ಸ್‌ ವ್ಯಾಗನ್‌(ಎಲ್‌ಪಿಜಿ ಟ್ಯಾಂಕರ್‌) ಮೇಲೆ ಹತ್ತಿ ಸೆಲ್ಫಿ ತೆಗೆಯುತ್ತಿದ್ದ ವೇಳೆ ರೈಲ್ವೆ ವಿದ್ಯುತ್‌ ತಂತಿ ತಗುಲಿ ಬಾಲಕನಿಗೆ ಗಂಭೀರ ಸುಟ್ಟ ಗಾಯವಾದ ಘಟನೆ ಬುಧವಾರ ನಡೆದಿದೆ.

Advertisement

ಜೋಕಟ್ಟೆ ಎಚ್‌ಪಿಸಿಎಲ್‌ ಕಾಲನಿ ನಿವಾಸಿ ಮಹಮ್ಮದ್‌ ದಿಶಾನ್‌(15)ವಿದ್ಯುತ್‌ ಅಘಾತಕ್ಕೊಳಗಾದ ಬಾಲಕ.ಇತರ ಸ್ನೇಹಿತರೊಂದಿಗೆ ರೈಲ್ವೆ ವ್ಯಾಗನ್‌ ಬಳಿ ಆಟವಾಡುತ್ತಿದ್ದಾಗ ದಿಶಾನ್‌ ಸೆಲ್ಫಿ ತೆಗೆಯಲು ಮೇಲೆ ಹೋಗಿದ್ದ ಎನ್ನಲಾಗಿದೆ. ಈ ಸಂದರ್ಭ ವಿದ್ಯುತ್‌ ತಂತಿ ಗಮನಿಸದೆ ಆಕಸ್ಮಿಕವಾಗಿ ಹಿಂಭಾಗದಲ್ಲಿದ್ದ ವಿದ್ಯುತ್‌ ತಂತಿ ತಗುಲಿದೆ. ವಿದ್ಯುತ್ ಶಾಕ್‌ಗೆ ದಿಶಾನ್‌ನ ದೇಹ ಭಾಗಶಃ ಸುಟ್ಟು ಹೋಗಿದ್ದು, ವ್ಯಾಗನ್‌ ಮೇಲಿಂದ ಕೆಳಗೆ ಬಿದ್ದು ಗಾಯಗೊಂಡಿದ್ದು ಇತರ ಮಕ್ಕಳು ನೆರವಿವಾಗಿ ಕೂಗಿದಾಗ ಸ್ಥಳೀಯರು ಆಗಮಿಸಿ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾದರು.

ಇದನ್ನೂ ಓದಿ :ಕುಂಭ ಮೇಳ ಅರ್ಧಕ್ಕೆ ಮೊಟಕುಗೊಳಿಸುವ ಚರ್ಚೆ ನಡೆದಿಲ್ಲ ಎಂದ ಅಧಿಕಾರಿಗಳು

ಎಂಆರ್‌ಪಿಎಲ್‌ನಿಂದ ಅನಿಲ ತುಂಬಿಸಲು ಎ.13ರಂದು ಬಂದಿದ್ದ ವ್ಯಾಗನ್‌ ಎ.14ರಂದು 3.30ಕ್ಕೆ ಹೊರಡಲು ಅನುಮತಿ ಲಭಿಸಿತ್ತು.ರೈಲ್ವೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next