Advertisement

ಲವ್ಲಿನಾರನ್ನು ನೇರವಾಗಿ ವಿಶ್ವಕೂಟಕ್ಕೆ ಆಯ್ಕೆ ಮಾಡಿದ್ದೇಕೆ?

08:44 PM Nov 10, 2021 | Team Udayavani |

ನವದೆಹಲಿ: ಟರ್ಕಿಯಲ್ಲಿ ಸದ್ಯದಲ್ಲೇ ಶುರುವಾಗಲಿರುವ ಬಾಕ್ಸಿಂಗ್‌ ವಿಶ್ವಚಾಂಪಿಯನ್‌ಶಿಪ್‌ಗೆ ಒಲಿಂಪಿಕ್ಸ್‌ ಕಂಚು ವಿಜೇತೆ ಲವ್ಲಿನಾ ಬೋರ್ಗೊಹೇನ್‌ರನ್ನು ನೇರವಾಗಿ ಆಯ್ಕೆ ಮಾಡಿದ್ದೇಕೆ? ಹೀಗೆಂದು ಬಿಎಫ್ಐಗೆ ದೆಹಲಿ ಉಚ್ಚ ನ್ಯಾಯಾಲಯ ಪ್ರಶ್ನಿಸಿದೆ. ಇಂತಹ ಕ್ರಮಗಳಿಂದ ಇತರೆ ಆಟಗಾರರು ನೊಂದುಕೊಂಡರೇ ಅವರು ದೇಶಕ್ಕಾಗಿ ಏನು ಮಾಡಬಲ್ಲರು ಎಂದೂ ಕೇಳಿದೆ.

Advertisement

ಲವ್ಲಿನಾ ಬೋರ್ಗೊಹೇನ್‌ ಈ ಬಾರಿ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದು ಅಮೋಘ ಸಾಧನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಯಾವುದೇ ಅರ್ಹತಾಸುತ್ತಿನ ಪಂದ್ಯಗಳನ್ನು ನಡೆಸದೇ ಅವರನ್ನೇ ಟರ್ಕಿ ವಿಶ್ವ ಚಾಂಪಿಯನ್‌ಶಿಪ್‌ಗೆ ಆಯ್ಕೆ ಮಾಡಲಾಗಿದೆ. ಇದನ್ನು ರಾಷ್ಟ್ರೀಯ ಬಾಕ್ಸಿಂಗ್‌ ಚಾಂಪಿಯನ್‌, 19 ವರ್ಷದ ಅರುಂಧತಿ ಚೌಧರಿ ಪ್ರಶ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿ ಉಚ್ಚ ನ್ಯಾಯಾಲಯ ಕೇಂದ್ರ ಕ್ರೀಡಾ ಸಚಿವಾಲಯಕ್ಕೂ ವಿವರಣೆ ಕೇಳಿ ನೋಟಿಸ್‌ ನೀಡಿದೆ.

ಇದನ್ನೂ ಓದಿ:ಬೆಳೆ ಕಟಾವು ಬಳಿಕ ಒತ್ತುವರಿ ತೆರವು : ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

ಪ್ರಸ್ತುತ ಯುವ ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ ಕೂಡ ಆಗಿರುವ ಅರುಂಧತಿ ಚೌಧರಿಗೆ ಲವ್ಲಿನಾ ಬೋರ್ಗೊಹೇನ್‌ರನ್ನು ಪ್ರತಿವಾದಿಯಾಗಿ ಹೆಸರಿಸಲೂ ನ್ಯಾಯಪೀಠ ಅನುಮತಿ ನೀಡಿದೆ.

ಈ ಕುರಿತ ಮುಂದಿನ ವಿಚಾರಣೆ ನ.22ರಂದು ನಡೆಯಲಿದೆ. ವಿಚಾರಣೆ ವೇಳೆ ಬಿಎಫ್ಐ ಪರ ನ್ಯಾಯಾಲಯಕ್ಕೆ ಹಾಜರಾದ ವಕೀಲರು; ಅರುಂಧತಿಯನ್ನು 70 ಕೆಜಿ ವಿಭಾಗದಲ್ಲಿ ಮೀಸಲು ಬಾಕ್ಸರ್‌ರನ್ನಾಗಿ ಹೆಸರಿಸಲಾಗಿದೆ ಎಂದು ವಿವರಣೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next