Advertisement

ಬೊರಿವಲಿ ರೈಲ್ವೇಯಾತ್ರಿ ಸಂಘದಿಂದ ಕೇಂದ್ರ ರೈಲ್ವೇ ಸಚಿವರಿಗೆ ಮನವಿ

01:08 PM Feb 26, 2019 | |

ಮುಂಬಯಿ: ಬೊರಿವಲಿ ರೈಲ್ವೇ  ಯಾತ್ರಿ ಸಂಘದ ವತಿಯಿಂದ ಪಶ್ಚಿಮ ವಿಭಾಗದಿಂದ ಮಂಗಳೂರಿಗೆ ಕೊಂಕಣ ರೈಲ್ವೇ ಮಾರ್ಗವಾಗಿ ರೈಲೊಂದನ್ನು ಓಡಿಸುವಂತೆ ಕೇಂದ್ರ ರೈಲ್ವೇ ಸಚಿವ ಪಿಯೂಷ್‌ ಗೋಯಲ್‌ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಬೊರಿವಲಿ ರೈಲ್ವೇ ಯಾತ್ರಿ ಸಂಘದ ಗೌರವಾಧ್ಯಕ್ಷ   ವಿರಾರ್‌  ಶಂಕರ್‌ ಶೆಟ್ಟಿಯವರ  ನೇತೃತ್ವದಲ್ಲಿ ಬೊರಿವಲಿ ಸಂಸದ  ಗೋಪಾಲ್‌ ಶೆಟ್ಟಿ ಅವರನ್ನೊಳಗೊಂಡು, ರೈಲ್ವೇ ಯಾತ್ರಿ ಸಂಘದ ಅಧ್ಯಕ್ಷ    ಶಿಮಂತೂರು  ಉದಯ ಶೆಟ್ಟಿಯವರು ಫೆ. 11ರಂದು ದಿಲ್ಲಿಯಲ್ಲಿ  ಕೇಂದ್ರದ  ರೈಲ್ವೇ  ಸಚಿವ ಪಿಯೂಷ್‌ ಗೋಯಲ್‌ ಮತ್ತು ರೈಲ್ವೇ ಬೋರ್ಡಿನ ಪಾರ್ಲಿಮೆಂಟ್‌ ಕಾರ್ಯಾಧ್ಯಕ್ಷ ಯಾಧವ್‌ ಅವರನ್ನು   ಭೇಟಿ ಮಾಡಿ ಮನವಿ ಸಲ್ಲಿಸಿದರು.

ಪಶ್ಚಿಮ ವಿಭಾಗದ ಬಾಂದ್ರದಿಂದ ಬೊರಿವಲಿ ಮೂಲಕ  ಕೊಂಕಣ್‌  ಮಾರ್ಗವಾಗಿ   ಮಂಗಳೂರು ತಲಪುವ ರೈಲನ್ನು ಶೀಘ್ರದಲ್ಲಿ ಪ್ರಾರಂಭಿಸುವಂತೆ ವಿನಂತಿಸಲಾಯಿತು.  ಮತ್ಸ್ಯಗಂಧ  ಹಾಗೂ  ಮಂಗಳೂರು ಸೂಪರ್‌ ಫಾಸ್ಟ್‌ ಕೊಂಕಣ ರೈಲುಗಳನ್ನು ಹೊರತುಪಡಿಸಿ ಪಶ್ಚಿಮ ವಿಭಾಗದಿಂದ ನೂತನ ರೈಲೊಂದನ್ನು ಓಡಿಸಬೇಕು. ವರ್ಷಪೂರ್ತಿ ತುಳು-ಕನ್ನಡಿಗರು ಊರಿಗೆ ತೆರಳಲು ರೈಲ್ವೇ ಟಿಕೆಟ್‌ಗಾಗಿ ಸಾಕಷ್ಟು ಕಷ್ಟಪಡುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರವನ್ನು ಒದಗಿಸಿಕೊಡುವಂತೆ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.

ಈ  ಸಂದರ್ಭದಲ್ಲಿ  ಮಂಗಳೂರಿನ ಸಂಸದ  ನಳಿನ್‌ ಕುಮಾರ್‌ ಕಟೀಲ್‌ ಕೂಡ ಮಾತುಕತೆಯಲ್ಲಿ ಸಹಕರಿಸಿದರು. ಇವರೊಂದಿಗೆ ರೈಲ್ವೇ ಯಾತ್ರಿ ಸಂಘದ ಪದಾಧಿಕಾರಿಗಳಾದ ಉಪಾಧ್ಯಕ್ಷ  ಪ್ರೇಮನಾಥ್‌  ಕೋಟ್ಯಾನ್‌, ಕರುಣಾಕರ ಶೆಟ್ಟಿ, ರಜಿತ್‌ ಸುವರ್ಣ, ಶೀಲಾ ಶೆಟ್ಟಿ ಮತ್ತಿತರರು  ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next