Advertisement

ಭೀಮ್‌ ಆ್ಯಪ್‌ ಬಳಸಿ ಟಿಕೆಟ್‌ ಬುಕ್‌ ಮಾಡಿದೆ ಹಣ ವಾಪಸ್‌

08:50 AM Dec 06, 2017 | Team Udayavani |

ನವದೆಹಲಿ: ಕೇಂದ್ರ ಸರ್ಕಾರದ ಭೀಮ್‌ ಆ್ಯಪ್‌ ಅನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಅದೇನೆಂದರೆ ಭೀಮ್‌ ಆ್ಯಪ್‌ ಬಳಸಿ ರೈಲ್ವೆ ಮುಂಗಡ ಟಿಕೆಟ್‌ ಕಾಯ್ದಿರಿಸಿ ದವರಲ್ಲಿ ತಿಂಗಳಿಗೊಮ್ಮೆ ಲಕ್ಕಿ ಡ್ರಾ ಮೂಲಕ 5 ಅದೃಷ್ಟಶಾಲಿಗಳನ್ನು ಆರಿಸಿ, ಅವರಿಗೆ ಉಚಿತವಾಗಿ ಪ್ರಯಾಣಿಸುವ ಅವಕಾಶ ನೀಡಲಾಗುವುದು. 

Advertisement

ಈ ಯೋಜನೆ ಇನ್ನು 6 ತಿಂಗಳ ಕಾಲ ಚಾಲ್ತಿಯಲ್ಲಿರುತ್ತದೆ. ಹಿಂದಿನ ತಿಂಗಳು ಭೀಮ್‌ ಆಪ್‌ ಬಳಸಿ www.irctc.co.in ಮೂಲಕ ಟಿಕೆಟ್‌ ಕಾಯ್ದಿರಿಸುವ ಪ್ರಯಾಣಿಕರಲ್ಲಿ 5 ಪ್ರಯಾಣಿಕರನ್ನು ಪ್ರತಿ ತಿಂಗಳ ಮೊದಲ ವಾರ ಆರಿಸಲಾ ಗುತ್ತದೆ. ಅದೃಷ್ಟಶಾಲಿಗಳಿಗೆ ಅವರು ವೆಚ್ಚ ಮಾಡಿದ್ದ ಸಂಪೂರ್ಣ ಪ್ರಯಾಣ ದರವನ್ನು ಮರಳಿಸಲಾಗುತ್ತದೆ ಎಂದು ಐಆರ್‌ಸಿಟಿಸಿ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next