Advertisement

ಬೊಮ್ಮಾಯಿ ಕಾಂಗ್ರೆಸ್‌ ಸೇರಲು ಮುಂದಾಗಿದ್ದರು: ಶೆಟ್ಟರ್‌

11:08 PM May 05, 2023 | Team Udayavani |

ಧಾರವಾಡ: ಯಡಿಯೂರಪ್ಪ ಅವರಿಗೆ 2012ರಲ್ಲಿ ಪ್ರತ್ಯೇಕ ಪಕ್ಷ ಕೆಜೆಪಿ ಕಟ್ಟಲು ಹೇಳಿ, ತಾವು ಕಾಂಗ್ರೆಸ್‌ ಕದ ತಟ್ಟಿದ್ದನ್ನು ಸಿಎಂ ಬಸವರಾಜ ಬೊಮ್ಮಾಯಿ ಮರೆತಿದ್ದಾರೆ. ಕಾಂಗ್ರೆಸ್‌ ಕೆಸರು ಎಂದು ಹೇಳುತ್ತಿರುವ ಅವರು ಆಗ ಸೇರುವಾಗ ಏನಂದುಕೊಂಡಿದ್ದರು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಹೇಳಿದರು.

Advertisement

ಧಾರವಾಡ ಗ್ರಾಮೀಣದಲ್ಲಿ ವಿನಯ ಕುಲಕರ್ಣಿ ಪರ ಪ್ರಚಾರ ಮಾಡಿದ ಅವರು, ಬೊಮ್ಮಾಯಿ ಎರಡು ದಿನಗಳ ಹಿಂದೆ ಸೆಂಟ್ರಲ್‌ ಕ್ಷೇತ್ರಕ್ಕೆ ಬಂದು ನನ್ನ ಬಗ್ಗೆ ಮಾತನಾಡಿದ್ದಾರೆ. ತಮಗೆ ಬೇಕಾದ ಕ್ಷೇತ್ರವನ್ನು ಕಾಂಗ್ರೆಸ್‌ ನೀಡದ ಕಾರಣ ಬಿಜೆಪಿಯಲ್ಲೇ ಬೊಮ್ಮಾಯಿ ಉಳಿದರು. ಹೀಗಾಗಿ ಬೊಮ್ಮಾಯಿ ನನಗೆ ನೈತಿಕತೆಯ ಪಾಠ ಮಾಡಬೇಕಿಲ್ಲ. ಸಿದ್ಧಾಂತ ಕುರಿತು ಮಾತನಾಡುವ ಬಿಜೆಪಿ ನಾಯಕರು ವಂಶಾಡಳಿತ, 65 ವರ್ಷಗಳ ಮಿತಿ ಹಾಗೂ ಚಾರಿತ್ರವಂತರ ಸ್ಪರ್ಧೆ ಕುರಿತು ಮಾತನಾಡುತ್ತಿದ್ದಾರೆ. ಆದರೆ 80 ಕ್ರಿಮಿನಲ್‌ ಪ್ರಕರಣವಿರುವ ರೌಡಿಶೀಟರ್‌ಗೆ ಕಲಬುರಗಿಯಲ್ಲಿ ಟಿಕೆಟ್‌ ನೀಡಿದ್ದಾರೆ. ಹಲವೆಡೆ ವಂಶಾಡಳಿತಕ್ಕೆ ಮಣೆ ಹಾಕಿದ್ದಾರೆ. 70 ವರ್ಷ ಮೀರಿದವರಿಗೂ ಟಿಕೆಟ್‌ ನೀಡಿದ್ದಾರೆ. ಬಿಜೆಪಿಯಲ್ಲೀಗ ಯಾವ ಸಿದ್ಧಾಂತವೂ ಉಳಿದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next