Advertisement

ನಿಗಮ- ಮಂಡಳಿ ಬದಲಾವಣೆಗೆ ಹೊರಟ ಬೊಮ್ಮಾಯಿ: ಬಿಎಸ್ ವೈ ಬಣ‌ ಬಿಸಿ

09:36 AM Jul 12, 2022 | Team Udayavani |

ಬೆಂಗಳೂರು: ನಿಗಮ- ಮಂಡಳಿ ಅಧ್ಯಕ್ಷ- ಉಪಾಧ್ಯಕ್ಷರ ರಾಜೀನಾಮೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಮೌಖಿಕ ಸೂಚನೆ ನೀಡಿರುವುದು ಬಿ.ಎಸ್.ಯಡಿಯೂರಪ್ಪ ಬಣದ ಕಣ್ಣು ಕೆಂಪಾಗಿಸಿದೆ.

Advertisement

ಯಡಿಯೂರಪ್ಪ ವಿದೇಶ ಪ್ರವಾಸ ತೆರಳಿದ್ದ ವೇಳೆ ಕಂದಾಯ ಸಚಿವ ಆರ್.ಅಶೋಕ್ ಹಾಗೂ ಆಪ್ತ ಸಚಿವರ ಜತೆ ಸೇರಿ ನಿಗಮ – ಮಂಡಳಿಗೆ ಹೊಸ ಅಧ್ಯಕ್ಷ ಉಪಾಧ್ಯಕ್ಷರ ಹೊಸ ಪಟ್ಟಿ ತಯಾರಿಸಿದ್ದರು. ಯಡಿಯೂರಪ್ಪ ಆಗಮನದವರೆಗೂ ಕಾಯ್ದ ಸಿಎಂ ಬೊಮ್ಮಾಯಿ ಈಗ ಪಟ್ಟಿ ಬಿಡುಗಡೆಗೆ ಸಿದ್ದರಾಗಿದ್ದಾರೆ.

ನಿರ್ಗಮನಗೊಳ್ಳುವವರ ಪಟ್ಟಿಯಲ್ಲಿ ಯಡಿಯೂರಪ್ಪ ಬಣದವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಪರಾಜಿತ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತ ಮುಖಂಡರಿಗೆ ಯಡಿಯೂರಪ್ಪ ಕಾಲದಲ್ಲಿ ನಿಗಮ- ಮಂಡಳಿ ಸ್ಥಾನ ನೀಡಲಾಗಿತ್ತು.

ಇದನ್ನೂ ಓದಿ:ಮಳೆಗೆ ತೊಯ್ದ ಬದುಕು: ಪರಿಹಾರ; ಸಿಎಂ ಅವರತ್ತ ಕರಾವಳಿಗರ ನಿರೀಕ್ಷೆ

ಇಂದು ಬೆಳಗ್ಗೆ 10.30 ರ ಸುಮಾರಿಗೆ ಅಧಿಕೃತವಾಗಿ ಪಟ್ಟಿ ಬಿಡುಗಡೆಯಾಗುತ್ತದೆ ಎಂಬ ನಿರೀಕ್ಷೆ ಇದೆ‌. ಆದರೆ ಆರು ತಿಂಗಳು ಭಾಗ್ಯಕ್ಕಾಗಿ ಎಲ್ಲರಿಗೂ ಬೇಸರ ಸೃಷ್ಟಿಸುವುದು ಏಕೆ ಎಂಬ ಪ್ರಶ್ನೆಯೂ ಉದ್ಭವವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next