Advertisement

ಇಂದಿನಿಂದ ಬೊಂಬಾಯಿಡ್‌ ತುಳುಪರ್ಬ-2018

04:40 PM Mar 29, 2018 | Team Udayavani |

ಮುಂಬಯಿ: ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ತೋನ್ಸೆ ವಿಜಯ ಕುಮಾರ್‌ ಶೆಟ್ಟಿ ನೇತೃತ್ವದ ಕಲಾಜಗತ್ತು ಮುಂಬಯಿ ವತಿಯಿಂದ ಬೊಂಬಾಯಿಡ್‌ ತುಳು ಪರ್ಬ-2018 ಸಂಭ್ರಮವು ಮಾ. 29 ಮತ್ತು ಮಾ. 30 ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಎರಡು ದಿನಗಳ ಕಾಲ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ನಡೆಯಲಿದೆ.

Advertisement

ತುಳು ಪರ್ಬ-2018 ಸಂಭ್ರಮಕ್ಕೆ ಮಾ. 29 ರಂದು ಮಧ್ಯಾಹ್ನ 1.30 ಕ್ಕೆ ಪುಣೆಯ ಉದ್ಯಮಿ, ಕಲಾಪೋಷಕ ಪ್ರವೀಣ್‌ ಶೆಟ್ಟಿ ಪುತ್ತೂರು ಇವರು ಚಾಲನೆ ನೀಡಲಿದ್ದಾರೆ. ತೋನ್ಸೆ ವಿಜಯ ಕುಮಾರ್‌ ಶೆಟ್ಟಿ ಇವರು ತಮ್ಮ ವಿಶೇಷ ಅಭಿನಯದ ಮುಖೇನ ಲಿಮ್ಕಾ ಬುಕ್‌ ಆಪ್‌ ರೆಕಾರ್ಡ್‌ನಲ್ಲಿ ರಾಷ್ಟ್ರೀಯ ದಾಖಲೆಯನ್ನು ಈಗಾಗಲೇ ನಿರ್ಮಿಸಿದ್ದು, ಮಾತ್ರವಲ್ಲದೆ ರಂಗಭೂಮಿಯ ಸರದಾರನಾಗಿ ಕಲಾಜಗತ್ತು ಕಲಾ ಸಂಸ್ಥೆಯ ಮುಖೇನ ಕಳೆದ ನಾಲ್ಕು ದಶಕಗಳಿಂದ ವಿವಿಧ ಹಲವಾರು ನಾಟಕಗಳನ್ನು ರಚಿಸಿ, ನಿರ್ದೇಶಿಸಿ, ಅಭಿನಯಿಸಿ ನಗರ, ರಾಜ್ಯ, ದೇಶ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಕಲಾ ಶ್ರೀಮಂತಿಕೆಯೊಂದಿಗೆ ತುಳುನಾಡ ಸಂಸ್ಕಾರ ಸಂಸ್ಕೃತಿಯ ಚಿತ್ರಣವನ್ನು ತನ್ನ ಅಮೋಘ ಪ್ರತಿಭೆಯ ಮುಖೇನ ಭಿತ್ತರಿಸಿದ ಶ್ರೇಯಸ್ಸಿಗೆ ಪಾತ್ರರಾಗಿದ್ದಾರೆ.

ಪ್ರಸ್ತುತ ವರ್ಷ ತನ್ನ ನೂತನ ಪರಿಕಲ್ಪನೆಯೊಂದಿಗೆ ಬೊಂಬಾಯಿಡ್‌ ತುಳುಪರ್ಬ-2018 ಎಂಬ ವಿಭಿನ್ನ ಸಾಂಸ್ಕೃತಿಕ ಮನೋರಂಜನ ಕಾರ್ಯಕ್ರಮವನ್ನು ಆಯೋಜಿಸಿ ಕಲಾ ರಸಿಕರನ್ನು ರಂಜಿಸಲಿದ್ದಾರೆ. ಎರಡು ದಿನಗಳ ಸಂಭ್ರಮದಲ್ಲಿ ಮುಂಬಯಿಯ ಸುಮಾರು 500 ಕ್ಕೂ ಹೆಚ್ಚಿನ ಕಲಾವಿದರು ಒಂದೇ ವೇದಿಕೆಯಡಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮಹಾನಗರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಕೆ,  ಕಲಾಪೋಷಕರಿಗೆ, ಸಮಾಜಮುಖೀ ಚಿಂತಕರಿಗೆ ಸಮ್ಮಾನ, ಪುರಸ್ಕಾರಗಳನ್ನಿತ್ತು ಗೌರವಿಸಲಾಗುವುದು.

ನಾಲ್ಕು ವಿಭಿನ್ನ ನಾಟಕಗಳ ಪ್ರದರ್ಶನ 
ಸಂಭ್ರಮದಲ್ಲಿ ನಾಲ್ಕು ನಾಟಕ ತಂಡಗಳಿಂದ ವೈವಿಧ್ಯಮಯ ನಾಲ್ಕು ನಾಟಕಗಳು ಪ್ರದರ್ಶನಗೊಳ್ಳಲಿವೆ. ಇತ್ತೀಚೆಗೆ ತವರೂರ ಹಾಗೂ ಮಹಾನಗರಾದ್ಯಂತ ಬಿಡುಗಡೆಗೊಂಡು ಮೆಚ್ಚುಗೆ ಗಳಿಸಿದ ಪತ್ತನಾಜೆ ತುಳು ಸಿನೇಮಾದ ನಿರ್ದೇಶಕ, ನಿರ್ಮಾಪಕರಾದ ವಿಜಯ ಕುಮಾರ್‌ ಶೆಟ್ಟಿ ನಿರ್ದೇಶನದಲ್ಲಿ ಕಲಾಜಗತ್ತು ಮುಂಬಯಿ ಕಲಾವಿದರಿಂದ ಪಗರಿದ ಮಂಚವು, ಮಾತ್ರವಲ್ಲದೆ 1983 ರಲ್ಲಿ ಬಂಟರ ಭವನದಲ್ಲಿ ಸುಮಾರು 10 ಪ್ರದರ್ಶನಗಳನ್ನು ಕಂಡ ವಿಜಯಕುಮಾರ್‌ ಶೆಟ್ಟಿ ಇವರು ರಚಿಸಿ, ನಿರ್ದೇಶಿಸಿರುವ ಈ ನಲ್ಕೆ ದಾಯೆ ನಾಟಕವು ಪ್ರಸ್ತುತ ಹರೀಶ್‌ ಶೆಟ್ಟಿ ಇವರ ನಿರ್ದೇಶನದಲ್ಲಿ ತುಳುಕೂಟ ಡೊಂಬಿವಲಿ ಇದರ ಕಲಾವಿದರ ಅಭಿನಯದಲ್ಲಿ ಪ್ರದರ್ಶನಗೊಳ್ಳಲಿದೆ.

ಅಭಿನಯ ಮಂಟಪ ಮುಂಬಯಿ ಕಲಾವಿದರಿಂದ ರವಿ ಕುಮಾರ್‌ ಕಡೆಕಾರು ರಚಿಸಿ, ಕರುಣಾಕರ ಕೆ. ಕಾಪು ಇವರ ನಿರ್ದೇಶನದಲ್ಲಿ ಪುಸೋìತ್ತಿಜ್ಜಿ ನಾಟಕವು ಪ್ರದರ್ಶನಗೊಳ್ಳಲಿದೆ. ಅಲ್ಲದೆ ವಿರಾಜ್‌ ನಂದಿಕೂರು ರಚಿಸಿ, ಮನೋಹರ್‌ ಶೆಟ್ಟಿ ನಂದಳಿಕೆ ನಿರ್ದೇಶನದ ಆಯಿನ ಆಂಡ್‌ ಬುಡ್‌ª ಬುಡ್ಲೆ ನಾಟಕವು ರಂಗಮಿಲನ ನಿರೆಕರೆ ಕಲಾವಿದರಿಂದ ಪ್ರದರ್ಶನ ಕಾಣಲಿದೆ. ಅಲ್ಲದೆ ನಗರದ ವಿವಿಧ ಭಜನ ಮಂಡಳಿಗೆ ಭಜನಾ ಸ್ಪರ್ಧೆ, ಸಮೂಹ ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

Advertisement

ತುಳುವ ಸಿರಿ ಪ್ರಶಸ್ತಿ ಪ್ರದಾನ 
ಸಮಾರಂಭದಲ್ಲಿ 2018 ನೇ ಸಾಲಿನ ತುಳುವ ಸಿರಿ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಸಮಾರಂಭದಲ್ಲಿ ಅತಿಥಿಗಳಾಗಿ ಬೊರಿವಲಿ ಸಂಸದ ಗೋಪಾಲ್‌ ಶೆಟ್ಟಿ, ರಾಜ್ಯ ಶಿಕ್ಷಣ ಸಚಿವ ವಿನೋದ್‌ ತಾಬ್ಡೆ, ರಾಜ್ಯ ವೈದ್ಯಕೀಯ ಶಿಕ್ಷಣ ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವೀಂದ್ರ ಚವಾಣ್‌, ಸಿನಿ ಆರ್ಟ್‌ ಯೂನಿಯನ್‌  ಇದರ ಅಧ್ಯಕ್ಷ ಗೋರಕ್ಷನಾಥ್‌ ಧೋತ್ರೆ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಮುನಿಯಾಲ್‌ ಸಮಾಜ ಸೇವಕ, ರಾಜಕೀಯ ಧುರೀಣ ಉದಯ ಶೆಟ್ಟಿ ಮುನಿಯಾಲ್‌, ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌, ಬಂಟರ ಸಂಘ ಮುಂಬಯಿ ಟ್ರಸ್ಟಿ ಕರ್ನಿರೆ ವಿಶ್ವನಾಥ ಶೆಟ್ಟಿ, ಬಂಟರ ಸಂಘ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷ ರಂಜನಿ ಎಸ್‌. ಹೆಗ್ಡೆ, ಬಂಟರ ಸಂಘ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್‌ ಶೆಟ್ಟಿ ತೆಳ್ಳಾರ್‌, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟÅ ಇದರ ಅಧ್ಯಕ್ಷ ಚಂದ್ರಶೇಖರ್‌ ಪಾಲೆತ್ತಾಡಿ, ಕೈಗಾರಿಕೋದ್ಯಮಿ ಪ್ರಕಾಶ್‌ ಭಟ್‌, ಬಂಟರ ಸಂಘ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಡಾ| ಆರ್‌. ಕೆ. ಶೆಟ್ಟಿ, ಐಕಾನ್‌ ಪ್ರತಿಷ್ಠಾನ ಮುಂಬಯಿ ಇದರ ಸಂಸ್ಥಾಪಕಾಧ್ಯಕ್ಷ ಕೈಲಾಶ್‌ ಶ್ರೀರಂಗ ಕಾಲೆ ಮೊದಲಾದವರು ಆಗಮಿಸಲಿದ್ದಾರೆ.

ಹಲವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಎರಡು ದಿನಗಳ ಕಾಲ ಬೊಂಬಾಯಿಡ್‌ ತುಳು ಪರ್ಬ-2018 ಜರಗಲಿದ್ದು, ಕಾರ್ಯಕ್ರಮಕ್ಕೆ ಕಲಾ ಜಗತ್ತು ಸಂಸ್ಥೆಯ ನಗರ, ದೇಶ ವಿದೇಶಗಳ  ಅಭಿಮಾನಿ ಬಳಗ ಹಾಗೂ ಕಲಾಪೋಷಕರ ಸಹಕಾರ, ಪ್ರೋತ್ಸಾಹದ ಅವಶ್ಯಕತೆಯಿದೆ. ಈ ಸಂದರ್ಭದಲ್ಲಿ ತುಳು ಸಾಹಿತಿಗಳು ಬರೆದ ಯಾವುದೇ ಕೃತಿಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ಆಸಕ್ತ ಸಾಹಿತಿಗಳು ತಮ್ಮ ಕೃತಿಗಳನ್ನು ಪ್ರದರ್ಶಿಸಬಹುದು. ಈ ಅಭೂತಪೂರ್ವ ಕಾರ್ಯ ಕ್ರಮಕ್ಕೆ ಮಹಾನಗರ ಕಲಾಭಿಮಾನಿ ಗಳೆಲ್ಲರೂ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಕಲಾಜಗತ್ತು ಮುಂಬಯಿ ಇದರ ರೂವಾರಿ ತೋನ್ಸೆ ವಿಜಯ ಕುಮಾರ್‌ ಶೆಟ್ಟಿ ಮತ್ತು ಸಂಸ್ಥೆಯ ಸರ್ವ ಸದಸ್ಯರು  ತಿಳಿಸಿದ್ದಾರೆ.

ಕಲಾಜಗತ್ತು ಮುಂಬಯಿ ಆಯೋಜನೆ 
ತುಳು ನಾಟಕ, ನಲಿಕೆ, ಭಜನೆ, ಆಟ, ಕೂಟ, ತುಳುವೆರೆ ಪೊರ್ಲು ಸಾಂಸ್ಕೃತಿಕ ಉತ್ಛಯ, ಬೊಂಬಾಯಿದ ಸುಮಾರ್‌ 500 ಕಲಾವಿದೆರ್‌ ಒಂಜೆ ಕೂಟೊಟು ಒಟ್ಟಾಪಿನ ಪೊರ್ಲು ಕಂಟ್‌ದ ಲೇಸ್‌. ಬೊಂಬಾಯಿದ ಬೇತೆ ಬೇತೆ ಕ್ಷೇತ್ರದ ಸಾಧಕೆರೆಗ್‌ ಪ್ರಶಸ್ತಿ-ಪುರಸ್ಕಾರ ಕೊರ್ಧು ಮಾನಾದಿಗೆ ಮಲ್ಪುನ ಮಲ್ಲ ಮನಸ್‌ನ ಎಡ್ಡೆ ಕಾರ್ಯಕ್ರಮ. ಪತ್ತನಾಜೆ ತುಳು ಸಿನೇಮಾದ ಪುಗಾರೆ¤ದ ನಿರ್ದೇಶಕೆ -ನಿರ್ಮಾಪಕೆ, ಲಿಮ್ಕಾ ಬುಕ್‌ ರಾಷ್ಟ್ರೀಯ ದಾಖಲೆದ ಮಹಾನ್‌ ಕಲಾವಿದೆ, ಕರ್ನಾಟಕ ರಾಜ್ಯೋತ್ಸವ 2008 ಪ್ರಶಸ್ತಿ ಪಡೆದಿನ ಕಲಾಜಗತ್ತು ಸಂಸ್ಥೆದ ಸಂಸ್ಥಾಪಕೆ ಡಾ| ತೋನ್ಸೆ ವಿಜಯಕುಮಾರ್‌ ಶೆಟ್ಟಿ ಮೆರೆನ ಪರಿಕಲ್ಪನೆ, ಆಯೋಜನೆದ ತುಳುಪರ್ಬ-2008. ಉಚಿತ ಪ್ರವೇಶ  ಉಂಡು.

Advertisement

Udayavani is now on Telegram. Click here to join our channel and stay updated with the latest news.

Next