Advertisement

ಮಣಿಪುರದಲ್ಲಿ ಗ್ರೆನೇಡ್‌ ಸ್ಫೋಟ ; ಬೆಳಗಾವಿಯ ಯೋಧ ಹುತಾತ್ಮ 

11:21 AM Oct 21, 2018 | Team Udayavani |

ಇಂಫಾಲ: ಶನಿವಾರ ಸಂಜೆ ಇಲ್ಲಿನ ಮಾರುಕಟ್ಟೆ ಪ್ರದೇಶದಲ್ಲಿ ಉಗ್ರಗಾಮಿಗಳು  ಎಸೆದ ಗ್ರೆನೇಡ್‌ಗೆ ಕರ್ತವ್ಯದಲ್ಲಿದ್ದ ಬೆಳಗಾವಿಯ ಸಿಆರ್‌ಪಿಎಫ್ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. 

Advertisement

ಹುತಾತ್ಮ ಯೋಧ  ಗೋಕಾಕ್‌ ನಿವಾಸಿಯಾಗಿರುವ ಉಮೇಶ್‌ ಹಳವರ್‌(25) ಎನ್ನುವವರಾಗಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಸಿಆರ್‌ಪಿಎಫ್ಗೆ ಸೇರ್ಪಡೆಯಾಗಿದ್ದರು ಎಂದು ತಿಳಿದು ಬಂದಿದೆ. 

ಉಮೇಶ್‌ ಅವರ ನಿವಾಸದಲ್ಲಿ  ಆಕ್ರಂದನ ಮುಗಿಲು ಮುಟ್ಟಿದೆ. 

ಸಿಆರ್‌ಪಿಎಫ್ ವಾಹನದಲ್ಲಿ ಬಿದ್ದ ಗ್ರೆನೇಡ್‌ ಹಿಡಿದು ಹೊರ ಹಾರಿದ ವೇಳೆ ಅವಘಡ ನಡೆದಿದೆ ಎನ್ನಲಾಗಿದೆ. ದಾಳಿಯಲ್ಲಿ ಇನ್ನೋರ್ವ ಯೋಧ ಗಂಭೀರವಾಗಿ ಗಾಯಗೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next