Advertisement

ಅಪಘಾತದಲ್ಲಿ ಯೋಧ ಸಾವು, ಸಾವನ್ನಪ್ಪಿದ 20 ಗಂಟೆ ನಂತರ ಶವ ಪತ್ತೆ

09:58 AM Dec 20, 2019 | keerthan |

ಚಿಕ್ಕಮಗಳೂರು: ಬೈಕ್ ಅಪಘಾತದಲ್ಲಿ ಮೃತಪಟ್ಟ ಯೋಧನ ಮೃತದೇಹ ಸುಮಾರು 20 ಗಂಟೆಗಳ ಪತ್ತೆಯಾದ ಘಟನೆ ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಹಳ್ಳಿ ಸಮೀಪ ನಡೆದಿದೆ.

Advertisement

ಚಿಕ್ಕಮಗಳೂರು ತಾಲೂಕಿನ ಬಾಳೇನಹಳ್ಳಿ ಗ್ರಾಮದ ಚಿದಾನಂದ್ ( 27) ಅಪಘಾತದಲ್ಲಿ ಮೃತಪಟ್ಟ ಸೈನಿಕ.

ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚಿದಾನಂದ್ ಕಳೆದ ಎರಡು ದಿನಗಳ ಹಿಂದೆ ಚಿಕ್ಕಪ್ಪನ ತಿಥಿ ಕಾರ್ಯಕ್ಕೆ ಬಂದಿದ್ದರು.

ಮೊನ್ನೆ ಬೈಕ್ ನಲ್ಲಿ ಸಖರಾಯಪಟ್ಟಣ ದಿಂದ ಬಾಳೇನಹಳ್ಳಿ ಗೆ ಹೋಗುವಾಗ ಅಪಘಾತ ನಡೆದಿತ್ತು. ಆದರೆ ಅವರ ಮೃತದೇಹ ಪತ್ತೆಯಾಗಿರಲಿಲ್ಲ.

ಪೊಲೀಸ್ ನೆಟ್ ವರ್ಕ್ ಬಳಸಿ ತನಿಖೆ ನಡೆಸಿದಾಗ 20 ಗಂಟೆ ನಂತರ ಹಳ್ಳದಲ್ಲಿ ಬಿದ್ದಿದ್ದ ಯೋಧನ‌ ಮೃತ ದೇಹ ಪತ್ತೆಯಾಗಿದೆ.

Advertisement

ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next