Advertisement

Maharashtra: ಹಾಸಿಗೆ ಪೆಟ್ಟಿಗೆಯೊಳಗೆ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ತಾಯಿ – ಮಗ

10:11 AM Sep 03, 2023 | Team Udayavani |

ಮಹಾರಾಷ್ಟ್ರ: ಹಾಸಿಗೆಯ ಪೆಟ್ಟಿಗೆಯೊಳಗೆ ತಾಯಿ – ಮಗನ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ ಅಮರಾವತಿ ನಗರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

Advertisement

ನೀಲಿಮಾ ಗಣೇಶ್ ಕಾಪ್ಸೆ(45), ಅವರ ಮಗ ಮಗ ಆಯುಷ್ ಕಾಪ್ಸೆ(22) ಮೃತರು.

ಶುಕ್ರವಾರ ಈ ಘಟನೆ ನಡೆದಿದ್ದು,ಮೊದಲಿಗೆ ನೆರೆಹೊರೆ ಅವರಿಗೆ ಮನೆಯಿಂದ ದುರ್ವಾಸನೆ ಬಂದಿದೆ. ಆ ಬಳಿಕ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಆ ಬಳಿಕ ಕುಟುಂಬಸ್ಥರು ನಾಗ್ಪುರದಿಂದ ಬಂದಿದ್ದಾರೆ. ಮನೆಗೆ ಬೀಗ ಹಾಕಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Udhayanidhi Stalin: ಸನಾತನ ಧರ್ಮ ಮಲೇರಿಯಾ,ಡೆಂಗ್ಯೂ ಇದ್ದಂತೆ; ಸಚಿವ ಉದಯನಿಧಿ ಸ್ಟ್ಯಾಲಿನ್

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಈ ವೇಳೆ ಮುಂಭಾಗದ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿರುವುದು ಮತ್ತು ಹಿಂಬಾಗಿಲನ್ನು ಮುಚ್ಚಿರುವುದು ಕಂಡುಬಂದಿದೆ. ಪೊಲೀಸರು ಒಂದು ಬಾಗಿಲನ್ನು ಒಡೆದು ಮನೆಯೊಳಗೆ ಪ್ರವೇಶ ಮಾಡಿದ್ದು, ಕೋಣೆಯಲ್ಲಿ ರಕ್ತದ ಕಲೆಗಳನ್ನು ನೋಡಿದ್ದಾರೆ. ಹಾಸಿಗೆಯ ಪೆಟ್ಟಿಗೆಯನ್ನು ತೆರೆದು ನೋಡಿದ್ದಾರೆ. ಈ ವೇಳೆ  ಅದರೊಳಗೆ ತಾಯಿ – ಮಗನ ಮೃತದೇಹವನ್ನು ನೋಡಿದ್ದಾರೆ.

Advertisement

ನೆರೆಹೊರೆಯವರ ಪ್ರಕಾರ, ಘಟನೆಯ ನಂತರ ಮಹಿಳೆಯ ಹಿರಿಯ ಮಗ ನಾಪತ್ತೆಯಾಗಿದ್ದಾನೆ. ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ಹೇಳಲಾಗಿದೆ.

ಸದ್ಯ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next