Advertisement

ದೋಣಿ ದುರಂತ: ಸುಖೇಶ್ ಕುಟುಂಬಕ್ಕೆ 3ಲಕ್ಷ ರೂ. ಪರಿಹಾರ ಧನ ವಿತರಿಸಿದ ಕೋಟ ಶ್ರೀನಿವಾಸ ಪೂಜಾರಿ

06:19 PM Oct 16, 2020 | Mithun PG |

ಮುಲ್ಕಿ: ದೋಣಿ ದುರಂತದಲ್ಲಿ ಇತ್ತೀಚೆಗೆ ಸಾವನ್ನಪ್ಪಿರುವ ಸುಖೇಶ್ ಬಪ್ಪನಾಡು ಅವರ ಮನೆಗೆ ಭೇಟಿಯಿತ್ತ ಮೀನುಗಾರಿಕಾ ಮತ್ತು ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು 3 ಲಕ್ಷ ರೂ. ಗಳ ಪರಿಹಾರ ಧನವನ್ನು ಆವರ ತಾಯಿಗೆ ವಿತರಿಸಿದ್ದಾರೆ.

Advertisement

ನಂತರ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ,  ಸುಖೇಶ್ ಆಕಸ್ಮಿಕವಾಗಿ ದುರ್ಮರಣವನ್ನಪ್ಪಿದ್ದರಿಂದ ತಕ್ಷಣ ತುರ್ತು ಪರಿಹಾರ ಬಿಡುಗಡೆಯನ್ನು ಶಾಸಕರ ಸಮಕ್ಷಮದಲ್ಲಿ ಮಾಡಲಾಗಿದೆ. ಮಾತ್ರವಲ್ಲದೆ ಮನೆಯೊಂದನ್ನು ಕೂಡ ಶೀಘ್ರವಾಗಿ ವಿತರಿಸಲಾಗುವುದು. ನೊಂದ ಕುಟುಂಬದ ಜೊತೆಗೆ ನಮ್ಮ ಸರ್ಕಾರವಿದೆ ಎಂದು ತಿಳಿಸಿದ್ದಾರೆ.

ಶಾಸಕ ಲಾಲಾಜಿ ಮೆಂಡನ್, ದ. ಕ. ಉಡುಪಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಜಿ. ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಜಿ. ಪಂ. ಸದಸ್ಯರಾದ ಗೀತಾಂಜಲಿಸುವರ್ಣ, ಶಶಿಕಾಂತ್ ಪಡುಬಿದ್ರಿ, ಶಿಲ್ಪಾ ಸುವರ್ಣ, ಬಿಜೆಪಿ ಕಾಪು ಮಂಡಲದ ಅಧ್ಯಕ್ಷ ಶ್ರೀಕಾಂತ ನಾಯಕ್, ಮೀನುಗಾರ ಮುಖಂಡರು, ಸ್ಥಳೀಯರು ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next