Advertisement

ಕೋಡಿಬೆಂಗ್ರೆಯಲ್ಲಿ ಬೋಟ್‌ಮುಳುಗಡೆ: 9 ಲಕ್ಷ ರೂ. ನಷ್ಟ

11:04 AM Aug 14, 2018 | Team Udayavani |

ಮಲ್ಪೆ: ಮೀನುಗಾರಿಕೆ ತೆರಳಿದ್ದ ಶಕುಂತಳಾ ಕರ್ಕೇರ ಅವರ ಹನುಮ ಸಾನ್ನಿಧ್ಯ ಬೋಟ್‌ ಕೋಡಿಬೆಂಗ್ರೆ ಸಮೀಪ ರವಿವಾರ  ಬಂಡೆಗೆ ಬಡಿದು ಹಾನಿಗೀಡಾಗಿ ಮುಳುಗಿದ್ದು, 9 ಲ. ರೂ. ನಷ್ಟ ಅಂದಾಜಿಸಲಾಗಿದೆ. 

Advertisement

ಕೋಡಿಬೆಂಗ್ರೆ ಬಳಿ ಸುಮಾರು 12 ಮಾರು ಆಳದೂರದಲ್ಲಿರುವಾಗ ತಾಂತ್ರಿಕ ದೋಷ ಉಂಟಾಗಿ ಎಂಜಿನ್‌ ಕೆಟ್ಟು ಹೋಯಿತು. ಗಾಳಿ ಮಳೆಯಿಂದಾಗಿ ಬೋಟ್‌ ನಿಯಂತ್ರಣಕ್ಕೆ ಸಿಗದೆ ಸುಮಾರು 7 ಮಾರುಗಳಷ್ಟು ತೀರಕ್ಕೆ ಬಂದು ಕಲ್ಲಿಗೆ ಬಡಿದು ನೀರು ತುಂಬಿ ಮುಳುಗಿತು. ಬೋಟಿನಲ್ಲಿದ್ದ ಮೂವರನ್ನು ಭವತ್ಯ ಮತ್ತು ಲಕ್ಷ್ಮೀಪಂಡರಿ ಬೋಟಿನವರು ರಕ್ಷಿಸಿದ್ದಾರೆ. ಬೋಟನ್ನು ಮಲ್ಪೆ ಬಂದರಿಗೆ ಎಳೆದು ತರಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next