Advertisement

ಕೋಡಿ: ಮರಳು ದಿಬ್ಬಕ್ಕೆ ಬೋಟು ಢಿಕ್ಕಿ

11:32 AM May 12, 2019 | keerthan |

ಕುಂದಾಪುರ: ಕೋಡಿ ಸಮುದ್ರ ತೀರದಿಂದ ಮೀನುಗಾರಿಕೆಗೆ ತೆರಳಿದ್ದ ಎರಡು ಸಣ್ಣ ಬೋಟ್‌ಗಳು ಮರಳು ದಿಬ್ಬಕ್ಕೆ ಢಿಕ್ಕಿ ಹೊಡೆದು ಮರಳಲ್ಲಿ ಹೂತು ಹೋದ ಘಟನೆ ಶನಿವಾರ ಸಂಭವಿಸಿದ್ದು, ಮೀನುಗಾರರು ಪಾರಾಗಿದ್ದಾರೆ.

Advertisement

ಕೋಡಿಯ ವಿಶ್ವನಾಥ ಖಾರ್ವಿಗೆ ಸೇರಿದ ಮಂದಾರ್ತಿ ಮಾತಾ ಹೆಸರಿನ 2 ಬೋಟ್‌ಗಳು ಸಮುದ್ರದಲ್ಲಿ ನೀರು ಕಡಿಮೆ ಇದ್ದ ಕಾರಣದಿಂದಾಗಿ ಹೂಳಲ್ಲಿ ಸಿಲುಕಿಕೊಂಡಿತ್ತು. ಬೋಟ್‌ನಲ್ಲಿದ್ದ ಮೀನುಗಾರರು ಮಧ್ಯಾಹ್ನದ ಭರತದ ತನಕ ಕಾದು, ಬಳಿಕ ಅಲ್ಲಿಂದ ಬೋಟನ್ನು ದಡಕ್ಕೆ ತಂದರು.

ಗಂಗೊಳ್ಳಿ ಬ್ರೇಕ್‌ ವಾಟರ್‌ ಕಾಮಗಾರಿ ಹಿನ್ನೆಲೆಯಲ್ಲಿ ತೆಗೆಯಲಾದ ಮಣ್ಣು ತೆರವುಗೊಳಿಸದೆ, ಅಲ್ಲಿಯೇ ರಾಶಿ ಹಾಕಿರುವುದು ಅವಘಡಕ್ಕೆ ಕಾರಣ ಎಂದು ಮೀನುಗಾರರು ಆರೋಪಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆಯೂ ಒಂದು ಬೋಟ್‌ ಇದೇ ರೀತಿ ಸಿಲುಕಿಕೊಂಡಿತ್ತು. ಅಳಿವೆಯಲ್ಲಿ ಮರಳು ರಾಶಿ ಬಿದ್ದಿದ್ದು, ಮಳೆಗಾಲಕ್ಕೆ ತೆರವುಗೊಳಿಸದಿದ್ದರೆ ಮತ್ತಷ್ಟು ಅನಾಹುತ ಸಂಭವಿಸುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next