Advertisement

BMW; ಮುಂಬೈನಲ್ಲಿ ಹಿಟ್‌-ರನ್‌:ಶಿವಸೇನೆ ಶಿಂಧೆ ಬಣದ ನಾಯಕನ ಪುತ್ರ ಸೆರೆ

10:45 PM Jul 07, 2024 | Team Udayavani |

ಮುಂಬೈ: ಪುಣೆ ಪೋರ್ಶೆ ಕಾರು ಅಪಘಾತ ಪ್ರಕರಣ ಸುದ್ದಿಯಲ್ಲಿರುವಂತೆಯೇ ಅದೇ ಮಾದರಿಯ ಮತ್ತೂಂದು ಘಟನೆ ಮುಂಬೈನಲ್ಲಿ ನಡೆದಿದೆ. ವೇಗವಾಗಿ ಬಂದ BMW ಕಾರೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬಳು ಮೃತಪಟ್ಟ ಘಟನೆ ಮುಂಬೈನ ವರ್ಲಿಯಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.

Advertisement

ಶಿಂಧೆ ಬಣದ ಶಿವಸೇನಾ ಪಕ್ಷದ ಹಿರಿಯ ನಾಯಕರೊಬ್ಬರ 24 ವರ್ಷದ ಮಗ ಕಾರನ್ನು ಚಲಾಯಿಸುತ್ತಿದ್ದ ಎಂದು ಪೊಲೀಸರು ಶಂಕಿಸಿದ್ದು, ಶಂಕಿತ ಮಿಹಿತ್‌ ಶಾ ಮದ್ಯಪಾನ ಮಾಡಿದ್ದ ಎಂದೂ ಹೇಳಲಾಗುತ್ತಿದೆ. ಆರೋಪಿ ರಕ್ತವನ್ನು ಪರೀಕ್ಷೆಗೊಳಪಡಿಸಲಾಗಿದೆ.

ಆರೋಪಿ ಪಾಲ್ಘರ್‌ ಜಿಲ್ಲೆಯ ಶಿವಸೇನೆ ಉಪನಾಯಕ ರಾಜೇಶ್‌ ಶಾ ಪುತ್ರ ಎನ್ನಲಾಗಿದ್ದು, ಈ ರಾಜಕಾರಣಿ ಹಾಗೂ ಆತನ ಡ್ರೈವರ್‌ ರಾಜೇಂದ್ರ ಸಿಂಗ್‌ ಬಿಜಾವತ್‌ರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉದ್ದೇಶ ಪೂರ್ವಕವಲ್ಲದ ಹತ್ಯೆ, ವೇಗದ ವಾಹನ ಚಾಲನೆ ಹಾಗೂ ಸಾಕ್ಷ್ಯ ನಾಶದಂಥ ಹಲವು ವಿಧಿಯಡಿ ಪ್ರಕರಣ ದಾಖಲಿಸಲಾಗಿದೆ. ಇನ್ನು ಮೃತ ಮಹಿಳೆಯನ್ನು ವರ್ಲಿ ನಿವಾಸಿ ಕಾವೇರಿ ನಕ್ವಾ ಎಂದು ಗುರುತಿಸಲಾಗಿದ್ದು, ಸ್ಕೂಟರ್‌ನಲ್ಲಿ ಪತಿ ಪ್ರದೀಕ್‌ ನಕ್ವಾ ಜತೆ ತೆರಳುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next