Advertisement

BMTC ಬಸ್‌ ಹರಿದು ಸಿವಿಲ್‌ ಗುತ್ತಿಗೆದಾರ ಸ್ಥಳದಲ್ಲೇ ಸಾವು

03:26 PM Oct 06, 2023 | Team Udayavani |

ಬೆಂಗಳೂರು: ಹಿಂದಿನಿಂದ ಬಂದ ಬಿಎಂಟಿಸಿ ಬಸ್‌ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸಿವಿಲ್‌ ಕಂಟ್ರ್ಯಾಕ್ಟರ್‌ ಮೃತಪಟ್ಟಿರುವ ಘಟನೆ ಯಲಹಂಕ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಮತ್ತಿಕೆರೆ ನಿವಾಸಿ ಭರತ್‌ ರೆಡ್ಡಿ(24) ಮೃತ ಸಿವಿಲ್‌ ಕಂಟ್ರ್ಯಾಕ್ಟರ್‌.

ಬುಧವಾರ ಸಂಜೆ 5 ಗಂಟೆಗೆ ಅಟ್ಟೂರಿನ ಮದರ್‌ ಡೇರಿ ಬಳಿ ಘಟನೆ ನಡೆದಿದೆ. ಸಿವಿಲ್‌ ಗುತ್ತಿಗೆದಾರನಾಗಿರುವ ಭರತ್‌ ರೆಡ್ಡಿ, ಬುಧವಾರ ಅಟ್ಟೂರಿನಲ್ಲಿ ನಿರ್ಮಿಸುತ್ತಿರುವ ಕಟ್ಟಡ ಪರಿಶೀಲಿಸಲು ಬೈಕ್‌ನಲ್ಲಿ ಹೋಗಿದ್ದರು. ವಾಪಸ್‌ ಸಂಜೆ 5 ಗಂಟೆಗೆ ಬರುವಾಗ ಅತಿ ವೇಗವಾಗಿ ಹಿಂದಿನಿಂದ ಬಂದ ಬಿಎಂಟಿಸಿ ಬಸ್‌ ಭರತ್‌ ರೆಡ್ಡಿ ಬೈಕ್‌ಗೆ ಗುದ್ದಿದ್ದು, ಕೆಳಗೆ ಬಿದ್ದ ಆತನ ಮೇಲೆ ಬಸ್‌ನ ಚಕ್ರಗಳು ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಸಂಚಾರ ಪೊಲೀಸರು ಹೇಳಿದರು.

ಯಲಹಂಕ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next