Advertisement

ಬಿಎಂಸಿ ಚುನಾವಣೆಯಲ್ಲಿ ಇಬ್ಬರು ತುಳು-ಕನ್ನಡಿಗರಿಗೆ ಜಯ

05:09 PM Feb 24, 2017 | |

ಮುಂಬಯಿ: ಬೃಹನ್ಮುಂಬಯಿ ಮಹಾ ನಗರ ಪಾಲಿಕೆಯ ಚುನಾವಣ ಫಲಿತಾಂಶ ಪ್ರಕಟಗೊಂಡಿದ್ದು, ಇಬ್ಬರು ತುಳು-ಕನ್ನಡಿಗ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಅಂಧೇರಿ ಪೂರ್ವದ ಚಕಾಲ ಸಹಾರ್‌ರೋಡ್‌ ಪಾರ್ಸಿವಾಡ ವಾರ್ಡ್‌ ಸಂಖ್ಯೆ 83 ರಿಂದ ಸ್ಪರ್ಧಿಸಿದ್ದ ವಿನ್ನಿಫ್ರೆಡ್‌ ಬ್ಯಾಪಿuಸ್ಟ್‌ ಡಿ’ಸೋಜಾ (ಹಾಲಿ ನಗರ ಸೇವಕಿ) ಮತ್ತೆ ಅತ್ಯಧಿಕ ಮತಗಳಿಂದ ಜಯಭೇರಿಗಳಿಸಿದ್ದಾರೆ.

Advertisement

ಅದೇ ರೀತಿ ಅಂಧೇರಿ ಪೂರ್ವದ ಮರೋಲ್‌ ಪೈಪ್‌ಲೇನ್‌ ಇಲ್ಲಿನ ವಾರ್ಡ್‌ ಸಂಖ್ಯೆ 82 ರಿಂದ ಸ್ಪರ್ಧಿಸಿದ್ದ  ಜಗದೀಶ್‌ ಕುಟ್ಟಿ ಅಮೀನ್‌ (ಅಣ್ಣಾ) ಅವರು ಜಯಗಳಿಸಿದ್ದಾರೆ. ವಿಜೇತರೀರ್ವರೂ  ಕಾಂಗ್ರೆಸ್‌ (ಐ) ಪಕ್ಷದ ಉಮೇದುವಾರರುಗಳಾಗಿ ಸ್ಪರ್ಧಿಸಿದ್ದರು. ವಿನ್ನಿಫ್ರೆಡ್‌ ಬಿ. ಡಿ’ಸೋಜಾ ಅವರು ಮೂಲತ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಲೋರೆಟ್ಟೊ ಮೂಲದವರಾಗಿದ್ದು, ಅವರು  ಶಿವಸೇನೆಯ ನಿಧಿ ಸಾವಂತ್‌ ಅವಗಿಂತ 566 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದೇ ವಾರ್ಡ್‌ನಿಂದ ಎನ್‌ಸಿಪಿಯಿಂದ ನ್ಯಾಯವಾದಿ ಸುಜತಾ ಡಿ.ಅಠವಾಳೆ, ಬಿಜೆಪಿಯಿಂದ ಪೂರ್ಣಿಮಾ ಮಾನೆ ಮತ್ತು ಎಂ.ಎನ್‌ ಎಸ್‌, ಅಖೀಲ ಭಾರತೀಯ ಸೇನೆ ಹಾಗೂ ನಾಲ್ವರು ಪಕ್ಷೇತರರು ಸೇರಿದಂತೆ ಒಟ್ಟು ಹತ್ತು ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಜಗದೀಶ್‌ ಅಮೀನ್‌ ಅವರು ಮೂಲತಃ  ಕಾರ್ಕಳ ತಾಲೂಕು ನಿಟ್ಟೆಯವರಾಗಿದ್ದು, ಅವರು  ಬಿಜೆಪಿಯ ಪ್ರತಿಸ್ಪರ್ಧಿ ಸಂತೋಷ್‌ ಕೇಳ್ಕರ್‌ ಅವರಗಿಂತ ಸುಮಾರು 35 ಮತಗಳ ಅಂತರದಿಂದ ವಿಜೇತರೆಣಿಸಿದ್ದಾರೆ. ಈ ವಾರ್ಡ್‌ನಿಂದ  ಶಿವಸೇನೆ, ಎನ್‌ಸಿಪಿ, ಸೇರಿದಂತೆ ಒಟ್ಟು ಹತ್ತು ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next