Advertisement

ಜೆಡಿಎಸ್ ಭದ್ರ ಕೋಟೆಗೆ ಮಂಜೇಗೌಡ ಎಂಟ್ರಿ; ಬೆಂಬಲಿಗರಿಗೆ ಬಾಡೂಟ!

09:20 AM Mar 24, 2018 | Team Udayavani |

ಹೊಳೆನರಸೀಪುರ: ಜೆಡಿಎಸ್‌ನ ಭದ್ರ ಕೋಟೆ ಎನಿಸಿಕೊಂಡಿರುವ ಎಚ್‌.ಡಿ.ರೇವಣ್ಣ ಅವರು ಪ್ರತಿನಿಧಿಸುತ್ತಿರುವ ಹಾಸನ ದ ಹೊಳೆನರಸೀಪುರ ಕ್ಷೇತ್ರದಲ್ಲಿ  ಕಾಂಗ್ರೆಸ್‌ ಸಂಭ್ಯಾವ್ಯ ಅಭ್ಯರ್ಥಿ ಮಂಜೇಗೌಡ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಾಗೂರು ಮಂಜೇಗೌಡ ಅವರು ರಾಜಕೀಯ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದು ಶುಕ್ರವಾರ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಮತದಾರರಿರಗೆ ಭರ್ಜರಿ ಬಾಡೂಟ ಉಣಬಡಿಸಿದ್ದಾರೆ. 

Advertisement

 ಭರ್ಜರಿ ಮಾಂಸದೂಟವನ್ನು ನೀಡುವ ಮೂಲಕ ಸಾವಿರಾರು ಕಾರ್ಯಕರ್ತರು ಮತ್ತು ಮತದಾರರಿಗೆ ಹತ್ತಿರವಾಗುವ ಯತ್ನ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಸೂಚನೆ ಮತ್ತು ಟಿಕೆಟ್‌ ಖಾತ್ರಿಯ ಮೇರೆಗೆ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕೀಯ ಕ್ಷೇತ್ರಕ್ಕೆ ಮಂಜೇಗೌಡ ಪ್ರವೇಶಗೈದಿದ್ದಾರೆ. ಕ್ಷೇತ್ರಾದ್ಯಂತ ಹಲವು ಕಾಂಗ್ರೆಸ್‌ ಕಾರ್ಯಕರ್ತರೊಡಣೆ ಸರಣಿ ಸಭೆಗಳನ್ನು ನಡೆಸುತ್ತಿದ್ದು ಕಾರ್ಯತಂತ್ರವನ್ನೂ ರೂಪಿಸುತ್ತಿದ್ದಾರೆ. 

ಮಂಜೇಗೌಡ ಸ್ಪರ್ಧೆಯಿಂದ ಕ್ಷೇತ್ರ ಹೈವೋಲ್ಟೆಜ್‌ ಕದನಕ್ಕೆ ಸಾಕ್ಷಿಯಾಗುವ ಎಲ್ಲಾ ಸಾಧ್ಯತೆಗಳಿವೆ. ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ರೇವಣ್ಣ ಅವರಿಗೆ ಸೆಡ್ಡು ಹೊಡೆಯಲು ರಣತಂತ್ರ ರೂಪಿಸಿದ್ದಾರೆ.

ಕೆಲ ದಿನಗಳ ಹಿಂದೆ ಮಂಜೇಗೌಡ ಅವರಿಗೆ ದೂರವಾಣಿ ಕರೆ ಮಾಡಿದ್ದ ಸಿಎಂ ಸಿದ್ದರಾಮಯ್ಯ ಸರ್ಕಾರಿ ಕೆಲಸಕ್ಕೆ ತಕ್ಷಣ ರಾಜೀನಾಮೆ ನೀಡಿ ಹೊಳೆನರಸೀಪುರ ಕ್ಷೇತ್ರದಲ್ಲಿ ಎಚ್‌.ಡಿ.ರೇವಣ್ಣ ಎದುರು ಚುನಾವಣೆಗೆ ನಿಲ್ಲುವಂತೆ ಸೂಚಿಸಿದ್ದರು. ಗೌಡ್ರ ಮಕ್ಕಳು ಗೆದ್ದಿದ್ದು ಸಾಕು, ಈ ಬಾರಿ ಮಂಜೇಗೌಡರನ್ನು ಗೆಲ್ಲಿಸಬೇಕು. ಎಲ್ಲರೂ ಅವರ ಪರ ಕೆಲಸ ಮಾಡಬೇಕು. ತಕ್ಷಣ ನೀನು ರಾಜೀನಾಮೆ ನೀಡಿ ಕ್ಷೇತ್ರಕ್ಕೆ ತೆರಳಬೇಕು ಎಂದು ಸಿದ್ದರಾಮಯ್ಯ ಸೂಚನೆ ನೀಡಿದ್ದರು. ಆ ಆಡಿಯೋ ವೈರಲ್‌ ಆಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next