Advertisement

ಸಂತ ನಿರಂಕಾರಿ ಮಂಡಲದಿಂದ ರಕ್ತದಾನ ಶಿಬಿರ

03:45 PM Apr 24, 2019 | Vishnu Das |

ಮುಂಬಯಿ: ಸಂತ ನಿರಂಕಾರಿ ಮಂಡಲದ ವತಿಯಿಂದ ಮಾನವ ಏಕತಾ ದಿನದ ಅಂಗವಾಗಿ ಎ. 21 ರಂದು ದೇಶವ್ಯಾಪಿ ವಿವಿಧ ರಾಜ್ಯಗಳಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

Advertisement

ಸಾವಿರಾರು ಸಂಖ್ಯೆಯಲ್ಲಿ ನಿರಂಕಾರಿ ಭಕ್ತಾದಿಗಳು ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನಗೈದರು. ಬಾಬಾ ಗುರುಬಚನ್‌ ಸಿಂಗ್‌ ಜೀ ಅವರ ಬಲಿದಾನದ ಸಂಕೇತವಾಗಿ ಪ್ರತಿ ವರ್ಷದ ಎಪ್ರಿಲ್‌ನಲ್ಲಿ ಈ ಶಿಬಿರವನ್ನು ಆಯೋಜಿಸಲಾಗುತ್ತದೆ. ದೇಶ ವ್ಯಾಪಿಯಾಗಿ ಇಂತಹ 82 ಶಿಬಿರಗಳನ್ನು ಆಯೋಜಿಸಲಾಗಿತ್ತು. ಅದರಂತೆ ಮುಂಬಯಿಯ ಚೆಂಬೂರ್‌ನಲ್ಲಿ ನಡೆದ ಶಿಬಿರದಲ್ಲಿ ವಿಎನ್‌ ದೇಸಾಯಿ ಬ್ಲಿಡ್‌ಬ್ಯಾಂಕ್‌ ವತಿಯಿಂದ 142, ಎಲ್‌. ಟಿ. ಸಯಾನ್‌ ಹಾಸ್ಪಿಟಲ್‌ ಬ್ಲಿಡ್‌ ಬ್ಯಾಂಕ್‌ ಮೂಲಕ 304, ಸಂತ ನಿರಂಕಾರಿ ಬ್ಲಿಡ್‌ ಬ್ಯಾಂಕ್‌ ವತಿಯಿಂದ 120 ಯುನಿಟ್‌ ರಕ್ತವನ್ನು ಸಂಗ್ರಹಿಸಲಾಯಿತು.

ಸೇವಾದಳ ಮತ್ತು ಎಸ್‌ಎನ್‌ಸಿಎಫ್‌ ಈ ರಕ್ತದಾನ ಶಿಬಿರಕ್ಕಾಗಿ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿದ್ದರು. ಶ್ರೀಮತಿ ಸುರೀಂದರ್‌ ಅಹುಜಾ ಅವರು ಶಿಬಿರವನ್ನು ಉದ್ಘಾಟಿಸಿದರು. ಮಂಡಳದ ಪ್ರಮುಖರು, ವಿಭಾಗೀಯ ಪ್ರಮುಖ, ಸದಸ್ಯರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಾವಿರಾರು ಕಾರ್ಯಕರ್ತರು ಶಿಬಿರದಲ್ಲಿ ಪಾಲ್ಗೊಂಡು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next