Advertisement

ಸಂತ ಅಲೋಶಿಯಸ್‌ ಕಾಲೇಜಿನಲ್ಲಿ ರಕ್ತದಾನ ಶಿಬಿರ

04:41 AM Feb 25, 2019 | |

ಮಹಾನಗರ: ಸಂತ ಅಲೋಶಿಯಸ್‌ ಕಾಲೇಜಿನ ಯೂತ್‌ ರೆಡ್‌ ಕ್ರಾಸ್‌ ಯೂನಿಟ್‌, ವೆನ್ಲಾಕ್‌ ಜಿಲಾಸ್ಪತ್ರೆಯ ಬ್ಲಿಡ್‌ ಬ್ಯಾಂಕ್‌ ಹಾಗೂ ಕೆಎಂಸಿಯ ಬ್ಲಿಡ್‌ ಬ್ಯಾಂಕ್‌ ಸಹಯೋಗದೊಂದಿಗೆ ಇತ್ತೀಚೆಗೆ ಕಾಲೇಜಿನ ಸಭಾಂಗಣದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.

Advertisement

ಕಾಲೇಜಿನ ಪ್ರಾಂಶುಪಾಲ ವಂ| ಡಾ| ಪ್ರವೀಣ್‌ ಮಾರ್ಟಿಸ್‌ ಎಸ್‌.ಜೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೆನ್ಲಾಕ್‌ ಜಿಲಾಸ್ಪತ್ರೆಯ ಬ್ಲಿಡ್‌ ಬ್ಯಾಂಕ್‌ ಮುಖ್ಯಸ್ಥ ಡಾ| ಶರತ್‌ಕುಮಾರ್‌ ಹಾಗೂ ಭವಾನಿಶಂಕರ್‌ ಉಪಸ್ಥಿತರಿದ್ದರು.

ಕಾಲೇಜಿನ ಯೂತ್‌ ರೆಡ್‌ ಕ್ರಾಸ್‌ ಅಧ್ಯಕ್ಷರಾದ ಪ್ರೇಮಲತಾ ಶೆಟ್ಟಿ ಹಾಗೂ ಅರ್ಜುನ್‌ಪ್ರಕಾಶ್‌ ಶಿಬಿರದಲ್ಲಿ ಸಹಕರಿಸಿದರು. ಸಂತ ಅಲೋಶಿಯಸ್‌ ಕಾಲೇಜಿನ ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದು, 180 ಯೂನಿಟ್‌ಗಳಷ್ಟು ರಕ್ತವನ್ನು ಸಂಗ್ರಹಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next