Advertisement

ರಕ್ತದ ಕ್ಯಾನ್ಸರ್‌: ಪುಟ್ಟ ಹಾರ್ದಿಕ್‌ಗೆ ನೆರವಿನ ಹಸ್ತ ಚಾಚುವಿರಾ?

02:04 AM Feb 11, 2020 | Sriram |

ಕುಂಬಳೆ: ಪೈವಳಿಕೆ ಪಂಚಾಯತ್‌ನ ಬಾಯಾರು ಗ್ರಾಮದ ಕನಿಯಾಲ ನಿವಾಸಿ ಹರೀಶ್‌ ಕುಲಾಲ್‌-ರಂಜಿತಾ ದಂಪತಿ ಪುತ್ರ 4 ವರ್ಷದ ಬಾಲಕ ಹಾರ್ದಿಕ್‌ ಕುಲಾಲ್‌ ರಕ್ತ ಕ್ಯಾನ್ಸರ್‌ ರೋಗದಿಂದ ಬಳಲುತ್ತಿರುವನು. ಅಂಗನವಾಡಿಯಲ್ಲಿ ಕಲಿಯುವ ಈ ಪುಟ್ಟ ಪೋರನಿಗೆ ಆರಂಭದಲ್ಲಿ ಸಾಮಾನ್ಯ ಜ್ವರ ಕಾಣಿಕೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಗುಣಮುಖವಾಗದೇ ಈ ಮಗುವಿನ ಕಾಯಿಲೆಯು ದಿನದಿಂದ ದಿನಕ್ಕೆ ಉಲ್ಬಣಗೊಂಡು ಬಳಿಕ ಮಂಗಳೂರು ಅತ್ತಾವರ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಉನ್ನತ ವೈದ್ಯಕೀಯ ಪರೀಕ್ಷೆಯಲ್ಲಿ ರಕ್ತದ ಕ್ಯಾನ್ಸರ್‌ ಈ ಮಗುವಿಗೆ ಬಾಧಿಸಿದ್ದು ಕಂಡು ಬಂದಿದೆ,ಈ ಈತನ ಚಿಕಿತ್ಸೆಗಾಗಿ ಸುಮಾರು 6ರಿಂದ 8 ಲಕ್ಷ ರೂ.ಗಳಿಗೂ ಅಧಿಕ ಮೊತ್ತ ಬೇಕೆಂಬುದಾಗಿ ವೈದ್ಯರು ತಿಳಿಸಿರುವರು.

Advertisement

ಕೂಲಿ ನಾಲಿ ಮಾಡುವ ಪುಟ್ಟ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಹರೀಶ್‌ ಅವರಿಗೆ ದಿಕ್ಕು ತೋಚದಾಗಿದೆ ಇಷ್ಟೊಂದು ದೊಡ್ಡ ಮೊತ್ತವನ್ನು ಭರಿಸುವಷ್ಟು ಸಾಮರ್ಥಯ ಅವರಿಂದ ಅಸಾಧ್ಯ. ಸಮಾಜವನ್ನು ಅವಲಂಬಿಸಿರುವ ಈ ಬಡ ಕುಟುಂಬಕ್ಕೆ ಉದಾರಿಗಳ ನೆರವು ಬೇಕಿದೆ.

ಸಮಾಜದ ಸಂಘ ಸಂಸ್ಥೆಗಳು, ದಾನಿಗಳು ಈ ಪುಟ್ಟ ಬಾಲಕನ ಮುಂದಿನ ಸುಂರ್ದ ಬದಕಿಗೆ ನೆರವಾಗಬೇಕಾಗಿದೆ. ಮುಂದಿನ 20 ದಿನಗಳಲ್ಲಿ 4 ಲ. ರೂ. ಅಗತ್ಯವಿದೆ. ನೆರವಾಗುವವರು ಬಾಲಕನ ತಾಯಿ ರಂಜಿತಾ ಅವರ ಈ ಖಾತೆ ನಂಬರಿಗೆ ಕಳುಹಿಸಬಹುದಾಗಿದೆ.ಎಸ್‌ಬಿ : 2002011011004324-ಐಎಫ್‌ಸಿ-ವಿಐಜೆಬಿ-0002002-ವಿಜಯ ಬ್ಯಾಂಕ್‌ ಬಾಯಾರು ಮುಳಿಗದ್ದೆ ಶಾಖೆ.

Advertisement

Udayavani is now on Telegram. Click here to join our channel and stay updated with the latest news.

Next