Advertisement

ಸ್ವರ್ಣಮಂದಿರ ಬಳಿ ಸ್ಫೋಟ: 6 ಮಂದಿಗೆ ಗಾಯ

11:44 PM May 07, 2023 | Team Udayavani |

ಚಂಡೀಗಢ: ಪಂಜಾಬ್‌ನ ಅಮೃತಸರದಲ್ಲಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸ್ವರ್ಣಮಂದಿರದ ಬಳಿ ಶನಿವಾರ ತಡರಾತ್ರಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ 6 ಮಂದಿ ಗಾಯಗೊಂಡಿರುವುದು ವರದಿಯಾಗಿದೆ. ಸ್ವರ್ಣಮಂದಿರದ ಕಟ್ಟಡ ಸಮೀ ಪದಲ್ಲೇ ಸ್ಫೋಟ ಸಂಭವಿಸಿದ್ದು, ಈ ವೇಳೆ ಸಿಡಿದ ಗಾಜಿನ ಚೂರುಗಳಿಂದಾಗಿ ಪಕ್ಕದಲ್ಲೇ ರಿಕ್ಷಾವೊಂದರಲ್ಲಿ ತೆರಳುತ್ತಿದ್ದ 6 ಮಹಿಳಾ ಪ್ರಯಾಣಿಕರು ಗಾಯಗೊಂಡಿ ದ್ದಾರೆ. ಘಟನೆ ವೀಡಿಯೋ ಸಿಸಿ ಟಿವಿಯಲ್ಲಿ ಸರೆಯಾಗಿದ್ದು, ಸ್ಥಳೀಯರು ಹಾಗೂ ಭಕ್ತಾದಿ ಭಯಭೀತರಾಗಿದ್ದಾರೆ. ಇನ್ನು ಸ್ಫೋಟದ ವೀಡಿಯೋ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಹಲವರು ಇದು ಭಯೋತ್ಪಾದಕ ಕೃತ್ಯವೆಂದು ಶಂಕೆ ವ್ಯಕ್ತಪಡಿ ಸಿದ್ದಾರೆ. ಆದರೆ ಪೊಲೀಸರು ಈ ಸಾಧ್ಯತೆಗಳನ್ನು ಅಲ್ಲಗೆಳೆದಿದ್ದಾರೆ. ವಿಧಿವಿಜ್ಞಾನ ತಂಡವು ಸ್ಥಳ ತಲುಪಿ, ಸ್ಫೋಟ ಸಂಭವಿಸಿದ ಕಿಟಕಿ ಬಳಿಇದ್ದಂಥ ಸ್ಫೋಟಕದ ಪೌಡರ್‌ ಅನ್ನು ವಶಪಡಿಸಿಕೊಂಡು ಪರೀಕ್ಷೆಗೆ ಕೊಂಡೊಯ್ದಿದೆ. ಈ ಕುರಿತಂತೆ ತನಿಖೆಯನ್ನೂ ನಡೆಸಲಾಗುತ್ತಿದೆ. ತನಿಖಾ ವರದಿಗಳ ಬಳಿಕವಷ್ಟೇ ನಿಜವಾದ ಸಂಗತಿ ತಿಳಿಯಬೇಕಿದೆ. ಅದಕ್ಕೂ ಮುನ್ನ ಘಟನೆ ಬಗ್ಗೆ ಊಹಾಪೋಹಗಳನ್ನು ಹಬ್ಬಿಸಬೇಡಿ ಎಂದು ಪೊಲೀಸರು ಸ್ಥಳೀಯರಿಗೆ ಮನವಿ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next