Advertisement

ಕೃಷ್ಣ ಮೃಗ ಬೇಟೆ: ಸಲ್ಲೂ, ಸೈಫ್, ಟಬುಗೆ ಕೋರ್ಟ್‌ ಬುಲಾವ್‌

10:05 AM Jan 14, 2017 | Team Udayavani |

ಜೋಧಪುರ: 1998ರಲ್ಲಿ ಕೃಷ್ಣ ಮೃಗ ಬೇಟೆಯಾಡಿದ ಪ್ರಕರಣ ಸಂಬಂಧ ಜ.25ರಂದು ವಿಚಾರಣೆಗೆ ಹಾಜರಾಗುವಂತೆ ಬಾಲಿವುಡ್‌ ನಟರಾದ ಸಲ್ಮಾನ್‌ ಖಾನ್‌, ಸೈಫ್ ಅಲಿ ಖಾನ್‌, ಸೋನಾಲಿ ಬೇಂದ್ರೆ, ನೀಲಂ ಹಾಗೂ ಟಬು ಅವರಿಗೆ ಜೋಧಪುರ ನ್ಯಾಯಾಲಯ ಸೂಚನೆ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷಿಗಳ ವಿಚಾರಣೆಯನ್ನು ಶುಕ್ರವಾರ ಪೂರ್ಣಗೊಳಿಸಿದ ನ್ಯಾಯಾಲಯ, ನಟರ ಹೇಳಿಕೆ ದಾಖಲು ಮಾಡಿಕೊಳ್ಳಲು 25ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತು. 1998ರ ಅ.1ರಂದು “ಹಮ್‌ ಸಾಥ್‌ ಸಾಥ್‌ ಹೈ’ ಚಿತ್ರೀಕರಣದ ವೇಳೆ ಸಲ್ಮಾನ್‌ ಖಾನ್‌ ಅವರು ಅಳಿವಿನಂಚಿನಲ್ಲಿರುವ ಕೃಷ್ಣಮೃಗವನ್ನು ಬೇಟೆಯಾಡಿದ್ದರು. ಈ ಪ್ರಕರಣದಲ್ಲಿ ಸಲ್ಮಾನ್‌ ಖಾನ್‌ ಜತೆಗೆ ಇತರ ನಟರು ಸಹ ಆರೋಪಿಯಾಗಿದ್ದಾರೆ. ಬೇಟೆಗೆ ಅಕ್ರಮ ಶಸ್ತ್ರಾಸ್ತ್ರ ಬಳಸಿದ ಆರೋಪವೂ ಸಲ್ಮಾನ್‌ ಖಾನ್‌ ಮೇಲಿದ್ದು, ಅದರ ತೀರ್ಪು ಜ.18ರಂದು ಹೊರಬೀಳಲಿದೆ. ಅಂದು ವಿಚಾರಣೆಗೆ ಹಾಜರಾಗುವಂತೆ ಸಲ್ಲೂ ಅವರಿಗೆ ಕೋರ್ಟ್‌ ಈಗಾಗಲೇ ಸೂಚನೆ ನೀಡಿದೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next